Tuesday, March 20, 2012

ಕರವೇ ಹೋರಾಟಗಳ ಸಮಗ್ರ ಚಿತ್ರಣ : ೪. ಆಡಳಿತ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡದ ಬಳಕೆಗಾಗಿ ಹೋರಾಟ

ಕನ್ನಡದ ಸಾರ್ವಭೌಮತ್ವ ಇರುವುದು ನಾಡಿನ ಯಾವುದೇ ಭಾಗದಲ್ಲಿರುವ ವ್ಯವಸ್ಥೆಗಳು ನಾಡಿನ ಅತಿ ಸಾಮಾನ್ಯ ಕನ್ನಡಿಗನೊಬ್ಬನಿಗೂ ತೊಡಕಾಗದಂತೆ ಇರುವುದರಲ್ಲಿ. ಕನ್ನಡನಾಡಲ್ಲಿ ಕನ್ನಡಿಗ, ನಾಡಿನ ಎಲ್ಲ ಕಛೇರಿ, ಅಂಗಡಿ, ಮುಂಗಟ್ಟು, ಮಳಿಗೆ, ನ್ಯಾಯಾಲಯ, ವಿಮಾನ-ರೈಲು-ಬಸ್ ನಿಲ್ದಾಣ... ಹೀಗೆ ಎಲ್ಲಿಯೇ ಆದರೂ ತೊಡಕಿಲ್ಲದಂತೆ ತನ್ನ ನುಡಿಯಲ್ಲೇ ವ್ಯವಹರಿಸಲು ಆಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿರುವ ವಿವಿಧ ವಾಣಿಜ್ಯ ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು, ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕಗಳನ್ನು ಹಾಕಬೇಕೆಂಬ ಸರ್ಕಾರಿ ಆದೇಶವನ್ನು ಉಲ್ಲಂಘನೆಯ ವಿರುದ್ಧ ಹಲವು ಬಾರಿ ಹೋರಾಟಗಳನ್ನು ನಡೆಸಿದೆವು.

ಸಾಂಕೇತಿಕವಾಗಿ ಕನ್ನಡವಿಲ್ಲದ ನಾಮಫಲಕಗಳಿಗೆ ಮಸಿ ಬಳಿದು ಪ್ರತಿಭಟನೆ ನಡೆಸಿದೆವು. ಮುಂದುವರೆದು ಕನ್ನಡಿಗರಾಗಿ ನಮಗಿರುವ ಗ್ರಾಹಕ ಹಕ್ಕುಗಳ ಬಗ್ಗೆ ಜನಜಾಗೃತಿಯನ್ನೂ, ಸಂಸ್ಥೆಗಳಿಗೆ, ಉದ್ದಿಮೆಗಳಿಗೆ ಅವರ ಪಾಲಿನ ಕರ್ತವ್ಯವನ್ನೂ ಎಲ್ಲ ರೀತಿಗಳಿಂದ ಮನವರಿಕೆ ಮಾಡಿಕೊಟ್ಟು, ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಪರಭಾಷಿಕರಿಗೆ ಅನುಕೂಲಕರ ಪೂರಕ ವಾತಾವರಣ ಕಲ್ಪಿಸಲು ಶ್ರಮಿಸಿದ್ದೇವೆ.
ಈ ವಿಚಾರದಲ್ಲಿ ನಾವು ಈವರೆಗೂ ನಡೆಸಿರುವ ಹೋರಾಟಗಳ ಹೆಚ್ಚಿನ ವಿವರಗಳು, ಪತ್ರಿಕಾ ವರದಿಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ: