Friday, November 30, 2012

೨೦೧೨ ರ ರಾಜ್ಯಮಟ್ಟದ ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ - ಪತ್ರಿಕಾವರದಿ

ಕನ್ನಡ ಚಳವಳಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ೩೦-೧೧-೨೦೧೨ ರಂದು ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿಯಲ್ಲಿ ರಾಜ್ಯಮಟ್ಟದ "ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ" ನಡೆಸಿತು.

ಸಮಾವೇಶದಲ್ಲಿ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಗೆ ನಾಗನೂರು ರುದ್ರಾಕ್ಷಿಮಠ ಸಿದ್ದರಾಮ ಸ್ವಾಮೀಜಿ ಹಾಗು ಕಾರಂಜಿ ಗುರುಸಿದ್ದ ಸ್ವಾಮಿಜಿ ಚಾಲನೆ ನೀಡಿದರು. ರಾಜ್ಯದ ನಾನ ಕಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ  ಆಗಮಿಸಿದ್ದ ವೇದಿಕೆ ಕಾರ್ಯಕರ್ತರು ಹಾಗು ಅಭಿಮಾನಿಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡರು. ಅಶೋಕ ವೃತ್ತದಿಂದ ಆರಂಭವಾದ ಬೃಹತ್ ಮೆರವಣಿಗೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತ, ಜಿಲ್ಲಾಧಿಕಾರಿ ಕಚೇರಿ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮಾರ್ಗವಾಗಿ ಸಿಪಿಎಡ್ ಮೈದಾನ ತಲುಪಿತು.

ಸಂಜೆ ಜಾನಪದ ರಸ ಸಂಜೆ ಕಾರ್ಯಕ್ರಮಕ್ಕೆ ಕರ್ನಾಟಕದ ಉಪಮುಖ್ಯಮಂತ್ರಿ ಹಾಗು ಗೃಹ ಸಚಿವರಾದ ಆರ್. ಅಶೋಕ್ ಚಾಲನೆ ನೀಡಿದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಚಂಚಲಿ ಸಿದ್ದಸಂಸ್ಥಾನಮಠದ ಅಲ್ಲಮಪ್ರಭುಶ್ರೀ, ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯಶ್ರೀ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರಾದ ರಾಘವೇಂದ್ರ ಜೋಶಿ, ರಾಮಚಂದ್ರ ಢವಳಿ, ಕಲ್ಲಪ್ಪಣ್ಣ ಸಂಗೊಳ್ಳಿ, ಸಾವಿತ್ರಿ ಅಪ್ಪುಗೋಳರನ್ನು ಸನ್ಮಾನಿಸಲಾಯಿತು.

ಇದರ ಪತ್ರಿಕಾವರದಿಗಳನ್ನು ಇಲ್ಲಿ ನೋಡಿ-

ಕನ್ನಡ ಪ್ರಭ ವರದಿ -



Thursday, November 29, 2012

ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ ಬೆಳಗಾವಿ ಸಜ್ಜು

ಇಂದು (೩೦-೧೧-೨೦೧೨) ನಮ್ಮ ವೇದಿಕೆ ನಡೆಸುತ್ತಿರುವ "ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ" ಕ್ಕೆ ಬೆಳಗಾವಿ ಸಜ್ಜಾಗಿ ನಿಂತಿದೆ.

ಇದರ ಬಗ್ಗೆ ಇಂದಿನ ಕನ್ನಡಪ್ರಭಾದಲ್ಲಿ ವರದಿ -


Wednesday, November 28, 2012

ಬೆಳಗಾವಿಯಲ್ಲಿ ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ


ಕರ್ನಾಟಕ ರಕ್ಷಣಾ ವೇದಿಕೆಯು ಇದೆ ತಿಂಗಳು ನವೆಂಬರ್ 30 (ಶುಕ್ರವಾರ) ರಂದು ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶವನ್ನು ಬೆಳಗಾವಿಯಲ್ಲಿ ಆಯೋಜಿಸಿದೆ. ಕನ್ನಡ ಚಳವಳಿಗೆ 50 ವರ್ಷ ತುಂಬಿದ ಈ ಸಂದರ್ಭದಲ್ಲಿ ಗಡಿನಾಡ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 12 ಘಂಟೆಗೆ ಗಡಿನಾಡ ಕನ
್ನಡಿಗರ ಸಾಂಸ್ಕೃತಿಕ ಜಾಥಾವನ್ನು ಚೆನ್ನಮ್ಮ ವೃತ್ತದಿಂದ ಹಮ್ಮಿಕೊಳ್ಳಲಾಗಿದೆ. ಅಂದು ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ ಸಂಜೆ 5 ಘಂಟೆಗೆ ಸಿಪಿ‌ಎಡ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ

ಇಂದಿನ ಕನ್ನಡಪ್ರಭದಲ್ಲಿ ಸಮಾವೇಶದ ಬಗ್ಗೆ ಸುದ್ದಿ:

Saturday, November 10, 2012

ಕನ್ನಡ ವಿರೋಧಿ ನೀತಿ ಖಂಡಿಸಿ ನಾರಾಯಣಗೌಡರ ನೇತೃತ್ವದಲ್ಲಿ ಕ್ರೈಸ್ತರ ಸಂಘ ಪ್ರತಿಭಟನೆ

ಕನ್ನಡ ವಿರೋಧಿ ನೀತಿ ಖಂಡಿಸಿ ಅಖಿಲ ಕರ್ನಾಟಕ ಕಥೋಲಿಕ್ ಕ್ರೈಸ್ತರ ಕನ್ನಡ ಸಂಘ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಅದರ ಪತ್ರಿಕಾ ವರದಿಗಳು ಇಲ್ಲಿವೆ:

ಕನ್ನಡಪ್ರಭ ವರದಿ:



ಉದಯವಾಣಿ ವರದಿ:


































ಈಸಂಜೆ ವರದಿ:


















ಕನ್ನಡ ವಿರೋಧಿ ನಿಲುವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಕನ್ನಡ ಧರ್ಮಗುರುಗಳ ಅಧ್ಯಕ್ಷತೆಯಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಯಲಿದೆ

ದಿನಾಂಕ ಮತ್ತು ಸಮಯ: ೧೦ ನವಂಬರ್ ೨೦೧೨, ಬೆಳಿಗ್ಗೆ ೧೧ ಘಂಟೆಗೆ
ಸ್ಥಳ - ಆರ್ಚ್ ಬಿಷಪ್ ಹೌಸ್, ಬೆಂಗಳೂರು