Tuesday, June 29, 2010

ಭ್ರಷ್ಟಾಚಾರ ತಡೆಗಟ್ಟಲು ರಾಜ್ಯ ಸರಕಾರ ವಿಫಲ - ಕರವೇ ಪ್ರತಿಭಟನೆ

ಕರ್ನಾಟಕದ ಆಡಳಿತದಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು ಇರುವ ಲೋಕಾಯುಕ್ತ ಸಂಸ್ಥೆಗೆ ಸರಿಯಾದ ಅಧಿಕಾರವನ್ನು ನೀಡದೇ, ಭ್ರಷ್ಟಾಚಾರವನ್ನು ತಡೆಗಟ್ಟಲು ವಿಫಲವಾಗಿರುವ ರಾಜ್ಯ ಸರಕಾರದ ನಡೆಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು 24/6/2010 ರಂದು ಪ್ರತಿಭಟನೆ ನಡೆಸಿದರು. ಇದರ ಪತ್ರಿಕಾ ವರದಿಯನ್ನು ನೋಡಿ-





Tuesday, June 22, 2010

ಹೊಗೇನಕಲ್ ಅಕ್ರಮ ಯೋಜನೆ ವಿರುದ್ಧ ಚಾಮರಾಜನಗರ ಜಿಲ್ಲೆ ಬಂದ್ ಯಶಸ್ವಿ

ಹೊಗೇನಕಲ್ ಅಕ್ರಮ ಯೋಜನೆಗೆ ವಿರೋಧಿಸಿ ಕರವೇ ಕರೆ ನೀಡಿದ್ದ ಚಾಮರಾಜನಗರ ಜಿಲ್ಲೆ ಬಂದ್ ಶಾಂತಿಯುತವಾಗಿ ಯಶಸ್ವಿಯಾಗಿದೆ. ಇದರ ಬಗೆಗಿನ ಪತ್ರಿಕಾ ವರದಿ ನೋಡಿ-












Thursday, June 17, 2010

ನಗರಪಾಲಿಕೆ ಶಾಲೆಗಳಲ್ಲಿ ಸಿ.ಬಿ.ಎಸ್.ಇ ಕಲಿಕೆ ವಿರೋಧಿಸಿ ಹೋರಾಟ

ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಬಿ.ಬಿ.ಎಂ.ಪಿ. ಗೆ ಸೇರಿದ ಶಾಲೆಗಳಲ್ಲಿ ಸಿ.ಬಿ.ಎಸ್.ಇ ಶಿಕ್ಷಣ ಪದ್ದತಿಯ ಬೋಧನೆಯನ್ನು ಆರಂಭಿಸಲು ಮುಂದಾಗಿದೆ. ಸಿ.ಬಿ.ಎಸ್.ಇ ಕಲಿಕಾ ವ್ಯವಸ್ಥೆಯಿಂದ ನಮ್ಮ ನಾಡಿನ ಮಕ್ಕಳ ಮೇಲೆ ಹಿಂದಿ ಹೇರಿಕೆ ಉಂಟಾಗುತ್ತದೆ .ಈ ಪದ್ದತಿಯಲ್ಲಿ ಕನ್ನಡದ ಮತ್ತು ಕನ್ನಡದಲ್ಲಿ ಕಲಿಕೆಯಿಲ್ಲದಿರುವುದರಿಂದ ಕನ್ನಡದ ಮಕ್ಕಳು ಕನ್ನಡದಿಂದಲೇ ದೂರಾಗುತ್ತಾರೆ. ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಸರಿಯಾದ ಪರಿಚಯವಿಲ್ಲದ ಈ ಕಲಿಕಾ ವ್ಯವಸ್ಥೆಯಿಂದ ನಮ್ಮ ನಾಡಿನ ಮಕ್ಕಳು ನಮ್ಮ ತನದಿಂದಲೇ ದೂರಾಗುತ್ತಾರೆ. ರಾಜ್ಯ ಸರಕಾರದ ಈ ನಿರ್ಧಾರ ನಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ತನ್ನ ಮೂಲಭೂತ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳೋ ನಡೆಯಾಗಿದೆ. ನಾಡಿನಲ್ಲಿ ಗುಣಮಟ್ಟದ ಶಿಕ್ಷಣ ಪದ್ದತಿಯನ್ನು ರೂಪಿಸಬೇಕಾದ ರಾಜ್ಯ ಸರಕಾರ, ಕೇಂದ್ರೀಯ ಪಠ್ಯಕ್ರಮಕ್ಕೆ ಮಣೆ ಹಾಕಿರುವುದು ಸರಿಯಲ್ಲ.

ರಾಜ್ಯ ಸರಕಾರದ ಈ ನಿರ್ಧಾರವನ್ನು ಖಂಡಿಸಿ ೧೭ ಜೂನ್ ೨೦೧೦ ರಂದು ಬಿಬಿಎಂಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಈ ಸಮಯದಲ್ಲಿ ಸಿ.ಬಿ.ಎಸ್.ಇ ಶಿಕ್ಷಣ ಪದ್ದತಿಯ ಬೋಧನೆಯ ನಿರ್ಧಾರವನ್ನು ಕೈಬಿಟ್ಟು ನಮ್ಮ ನುಡಿ,ಸಂಸ್ಕೃತಿ ಮತ್ತು ಇತಿಹಾಸವನ್ನು ಎತ್ತಿಹಿಡಿಯುವ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕೆಂದು ರಾಜ್ಯ ಸರಕಾರವನ್ನು ಆಗ್ರಹಿಸಲಾಯಿತು.
ಪ್ರತಿಭಟನೆಯ ವರದಿಯನ್ನು ಇಲ್ಲಿ ನೋಡಿ...





Wednesday, June 2, 2010

ಪರಭಾಷಿಕರನ್ನು ರಾಜ್ಯಸಭೆಗೆ ಆಯ್ಕೆ ಮಾಡಬೇಡಿ

ಪರಭಾಷಿಕರಾದ ವೆಂಕಯ್ಯನಾಯ್ಡುರನ್ನು ಆಯ್ಕೆ ಮಾಡಲು ಹೊರಟಿರುವ ಬಿಜೆಪಿಯ ವಿರುದ್ಧ ಕರವೇ ಕಾರ್ಯಕರ್ತರು ೨-೬-೨೦೧೦ ರಂದು ಪ್ರತಿಭಟನೆ ನಡೆಸಿದರು