Thursday, December 29, 2011

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ "ನೇರನುಡಿ" ಪುಸ್ತಕ ಬಿಡುಗಡೆ ಕಾರ್ಯಕ್ರಮ

ಕರವೇ ನಲ್ನುಡಿಯಲ್ಲಿ ಪ್ರಕಟಗೊಳ್ಳುತ್ತಿದ್ದ "ನೇರನುಡಿ" ಅಂಕಣಗಳ ಸಂಕಲವನ್ನು ೨೬-೧೨-೨೦೧೧ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕರೂಪದಲ್ಲಿ ಹೊರತರಲಾಯಿತು. ೭೮ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಸಿ.ಪಿ.ಕೆ. ಹಾಗು ಗಣ್ಯರಾದ ಸಚಿವ ಆರ್. ಅಶೋಕ್, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಡಾ. ನಲ್ಲೂರು ಪ್ರಸಾದ್, ರಂಜಾನ್ ದರ್ಗ, ಡಾ. ನಟರಾಜ್ ಹುಳಿಯಾರ್ ಹಾಜರಿದ್ದರು.

ಇದರ ವರದಿಯನ್ನು ಇಲ್ಲಿ ನೋಡಿ.



Sunday, December 18, 2011

ಗುಲ್ಬರ್ಗಾ ಪಾಲಿಕೆಯಲ್ಲಿ ಉರ್ದು ಎರಡನೆ ಆಡಳಿತ ಭಾಷೆ ಎಂಬ ನಿರ್ಧಾರವನ್ನು ಸರ್ಕಾರ ಪರಿಗಣಿಸಬಾರದೆಂದು ಹೋರಾಟ

ಗುಲ್ಬರ್ಗಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಉರ್ದು ಭಾಷೆಗೆ ಎರಡನೆ ಆಡಳಿತ ಭಾಷೆಯ ಸ್ಥಾನ ನೀಡುವ ನಿರ್ಣಯವನ್ನು ಕೈಗೊಂಡಿದ್ದಾರೆ. ಆದರೆ, ಗುಲ್ಬರ್ಗಾ ಮಹಾನಗರದ ವ್ಯಾಪ್ತಿಯಲ್ಲಿ ವಾಸಿಸುವ ಮುಸಲ್ಮಾನ ಬಂಧುಗಳು ಕನ್ನಡಿಗರೇ ಆಗಿದ್ದು, ಎಲ್ಲರ ಜೊತೆ ಬೆರೆತು ಬಾಳುತಿದ್ದಾರೆ. ಕೇವಲ ರಾಜಕೀಯ ಕಾರಣಗಳಿಗಾಗಿ ಮಾಡಿರುವ ಇಂತಹ ನಿರ್ಧಾರ ಜನರನ್ನು ದಿಕ್ಕುತಪ್ಪಿಸುವ ಕೆಲಸವಾಗಿದ್ದು, ಸರ್ಕಾರ ಇದನ್ನು ಪರಿಗಣಿಸಬಾರದು ಎಂದು ಒತ್ತಾಯಿಸಿ ನಾವು ಬೆಂಗಳೂರಿನಲ್ಲಿ ದಿನಾಂಕ ೧೭ ಡಿಸೆಂಬರ್ ೨೦೧೧ ರಂದು ಪ್ರತಿಭಟನೆ ನಡೆಸಿದೆವು.

ನಾವು ನಡೆಸಿದ ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಕನ್ನಡಪ್ರಭ ವರದಿ:
ವಿಜಯಕರ್ನಾಟಕ ವರದಿ:

ಉದಯವಾಣಿ ವರದಿ:
ಈಸಂಜೆ ವರದಿ:

Wednesday, December 14, 2011

ಮೆಟ್ರೋದಲ್ಲಿ ಕನ್ನಡಿಗರಿಗೆ ಆದ್ಯತೆ ಬಗ್ಗೆ ಕರವೇ ನಡೆಸಿದ ಹೋರಾಟಕ್ಕೆ ಬಿ.ಎಂ.ಆರ್.ಸಿ.ಎಲ್. ಪ್ರತಿಕ್ರಿಯೆ

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ನೀಡಬೇಕು, ಎಲ್ಲಾ ಹಂತಗಳಲ್ಲಿಯೂ ಕನ್ನಡವನ್ನು ಬಳಸಬೇಕು ಮತ್ತು ಅನಗತ್ಯವಾದ ಹಿಂದಿ ಬಳಕೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿರುವ ಬಿ.ಎಂ.ಅರ್.ಸಿ.ಎಲ್ ಮುಖ್ಯ ಕಛೇರಿಯ ಮುಂದೆ ನಾವು ಡಿಸೆಂಬರ್ ೨, ೨೦೧೧ ರಂದು ಪ್ರತಿಭಟನೆ ನಡೆಸಿದ್ದೆವು. ಕನ್ನಡಿಗರ ಪರವಾಗಿ ನಾವು ಮಾಡಿದ್ದ ಈ ಹಕ್ಕೊತ್ತಾಯ ಪರಿಣಾಮ ಬೀರಿದ್ದು, ಪ್ರತಿಭಟನೆ ವೇಳೆ ನಾವು ಮನವಿಪತ್ರದಲ್ಲಿ ಪ್ರಸ್ತಾಪಿಸಿದ್ದ ಕೆಲವೊಂದು ವಿಷಯಗಳಿಗೆ ಬಿ.ಎಂ.ಆರ್.ಸಿ.ಎಲ್. ಕಂಪನಿ ಪ್ರತಿಕ್ರಿಯೆ ನೀಡಿದೆ.

ಬಿ.ಎಂ.ಆರ್.ಸಿ.ಎಲ್ ಕಂಪನಿಯ ಕಾರ್ಯದರ್ಶಿ ಮತ್ತು ಪ್ರಧಾನ ವ್ಯವಸ್ಥಾಪಕರು ಪ್ರತಿಕ್ರಿಯೆ ನೀಡಿ ಕಳಿಸಿರುವ ಪತ್ರದ ಪ್ರತಿಯನ್ನು ಕೆಳಗೆ ಲಗತ್ತಿಸಲಾಗಿದೆ:








Friday, December 2, 2011

ನಮ್ಮ ಮೆಟ್ರೋದ ಕನ್ನಡ-ಕನ್ನಡಿಗ ವಿರೋಧಿ ನೀತಿ ವಿರುದ್ಧ ನಡೆಸಿದ ಪ್ರತಿಭಟನೆಯ ಪತ್ರಿಕಾ ವರದಿಗಳು

ಬೆಂಗಳೂರು ಮೆಟ್ರೋದಲ್ಲಿ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ನೀಡಬೇಕು, ಎಲ್ಲಾ ಹಂತಗಳಲ್ಲಿಯೂ ಕನ್ನಡವನ್ನು ಬಳಸಬೇಕು, ಅನಗತ್ಯವಾದ ಹಿಂದಿ ಬಳಕೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಶಾಂತಿನಗರದಲ್ಲಿರುವ ಬಿ.ಎಂ.ಅರ್.ಸಿ.ಎಲ್ ಮುಖ್ಯ ಕಛೇರಿಯ ಮುಂದೆ ನಾವು ನೆನ್ನೆ (ಡಿಸೆಂಬರ್ ೨, ೨೦೧೧ ರಂದು) ನಡೆಸಿದ ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಕನ್ನಡಪ್ರಭ ವರದಿ:
ಡಿ.ಎನ್.ಎ. ವರದಿ:
ಪ್ರಜಾವಾಣಿ ವರದಿ:
ಈಸಂಜೆ ವರದಿ:
ಸಂಜೆವಾಣಿ ವರದಿ:

ನಮ್ಮ ಮೆಟ್ರೋದ ಕನ್ನಡ-ಕನ್ನಡಿಗ ವಿರೋಧಿ ನೀತಿಯನ್ನು ಖಂಡಿಸಿ ಸಲ್ಲಿಸಲಾದ ಮನವಿ ಪತ್ರ

ಬೆಂಗಳೂರು ಮೆಟ್ರೋದಲ್ಲಿ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ನೀಡಬೇಕು, ಎಲ್ಲಾ ಹಂತಗಳಲ್ಲಿಯೂ ಕನ್ನಡವನ್ನು ಬಳಸಬೇಕು, ಅನಗತ್ಯವಾದ ಹಿಂದಿ ಬಳಕೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ನಮ್ಮ ವೇದಿಕೆಯಿಂದ ಶಾಂತಿನಗರದಲ್ಲಿರುವ ಬಿ.ಎಂ.ಅರ್.ಸಿ.ಎಲ್ ಮುಖ್ಯ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದೆವು ನಂತರ ಬಿ.ಎಂ.ಅರ್.ಸಿ.ಎಲ್ ನ ಸಂಪರ್ಕಾಧಿಕಾರಿ ಶ್ರೀ ಚೌಹಾಣ್ ಅವರಿಗೆ ನಮ್ಮ ಬೇಡಿಕೆಗಳಿರುವ ಮನವಿ ಪತ್ರವನ್ನು ಸಲ್ಲಿಸಿದೆವು.

ಮನವಿ ಪತ್ರದ ಪ್ರತಿಯನ್ನು ಕೆಳಗಡೆ ನೋಡಿ:

ನಮ್ಮ ಮೆಟ್ರೋದ ಕನ್ನಡ-ಕನ್ನಡಿಗ ವಿರೋಧಿ ನೀತಿ ವಿರುದ್ಧ ಕರವೇ ಹೋರಾಟ

ಬೆಂಗಳೂರು ಮೆಟ್ರೋದಲ್ಲಿ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ನೀಡಬೇಕು, ಎಲ್ಲಾ ಹಂತಗಳಲ್ಲಿಯೂ ಕನ್ನಡವನ್ನು ಬಳಸಬೇಕು, ಅನಗತ್ಯವಾದ ಹಿಂದಿ ಬಳಕೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ನಮ್ಮ ವೇದಿಕೆಯಿಂದ ಶಾಂತಿನಗರದಲ್ಲಿರುವ ಬಿ.ಎಂ.ಅರ್.ಸಿ.ಎಲ್ ಮುಖ್ಯ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದೆವು.

ನಮ್ಮ ಪ್ರತಿಭಟನೆಯ ಕೆಲವು ಚಿತ್ರಗಳನ್ನು ಕೆಳಗಡೆ ನೋಡಿ:





Sunday, November 27, 2011

ಬೆಳಗಾವಿ ಪ್ರಸಕ್ತ ವಿದ್ಯಮಾನಗಳ ಕುರಿತು ಟಿ.ಎ. ನಾರಾಯಣಗೌಡರು ಕನ್ನಡಪ್ರಭಕ್ಕೆ ನೀಡಿದ ಸಂದರ್ಶನ

ಬೆಳಗಾವಿಯಲ್ಲಿ ಎಂ.ಇ.ಎಸ್. ಕಿಡಿಗೇಡಿಗಳು, ಕನ್ನಡಿಗರು ಮತ್ತು ಕನ್ನಡ ಭಾಷೆಯ ಮೇಲೆ ದೌರ್ಜನ್ಯ ನಡೆಸಿದಾಗಲೆಲ್ಲಾ ಹೋರಾಟಕ್ಕಿಳಿದು ಕನ್ನಡ ಮತ್ತು ಕನ್ನಡಿಗರ ಹಿತ ಕಾಯುವಲ್ಲಿ ಮುಂಚೂಣಿ ವಹಿಸುತ್ತಿರುವುದು ಕರ್ನಾಟಕ ರಕ್ಷಣಾ ವೇದಿಕೆ. ಬೆಳಗಾವಿಯಲ್ಲಿ ಇಂದು ಎಂ.ಇ.ಎಸ್. ರಾಜಕೀಯ ಶಕ್ತಿ ಕುಂದಲು ಪ್ರಮುಖ ಕಾರಣವೂ ಕರ್ನಾಟಕ ರಕ್ಷಣಾ ವೇದಿಕೆ. ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರು, ಬೆಳಗಾವಿಯಲ್ಲಿನ ಇಂದಿನ ಪ್ರಸಕ್ತ ವಿದ್ಯಮಾನಗಳ ಕುರಿತು ಎಂ.ಇ.ಎಸ್. ಮತ್ತು ಬಾಳಾ ಠಾಕ್ರೆ ವಿರುದ್ಧ ತಮ್ಮ ಆಕ್ರೋಶವನ್ನು ಹೊರಗೆಡಹುತ್ತಾ ಕನ್ನಡಪ್ರಭಕ್ಕೆ ನೀಡಿದ ಸಂದರ್ಶನದ ವರದಿ ನೆನ್ನೆಯ ಕನ್ನಡಪ್ರಭದಲ್ಲಿ ಪ್ರಕಟವಾಗಿದೆ.

ಸಂದರ್ಶನದ ಹೆಚ್ಚಿನ ವಿವರಗಳನ್ನು ಕೆಳಗೆ ನೋಡಿ:

Thursday, November 24, 2011

ಬೆಳಗಾವಿ: ನಾಡದ್ರೋಹಿ ಮೇಯರ್-ಉಪಮೇಯರ್ ಬಂಧನಕ್ಕೆ ಆಗ್ರಹಿಸಿ, ಮುಖ್ಯಮಂತ್ರಿ ಗೃಹ ಕಚೇರಿ ಮುಂದೆ ತೀವ್ರ ಹೋರಾಟ

ಬೆಳಗಾವಿ ಪಾಲಿಕೆಯ ಮೇಯರ್-ಉಪಮೇಯರ್ ಬಂಧನಕ್ಕೆ ಆಗ್ರಹಿಸಿ ನಿರಂತರ ಹೋರಾಟ ಮಾಡುತ್ತಿರುವ ನಾವು, ಇಂದೂ (೨೪ ನವೆಂಬರ್ ೨೦೧೧ ರಂದು) ಕೂಡ ಹೋರಾಟ ಮುಂದುವರೆಸಿದೆವು. ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿ ಅವರ ಗೃಹ ಕಚೇರಿ "ಕೃಷ್ಣಾ" ಮುಂದೆ ನೂರಾರು ಕಾರ್ಯಕರ್ತರೊಡನೆ ರಾಜ್ಯ ಸರ್ಕಾರದ ಧೋರಣೆಯನ್ನು ಪ್ರತಿಭಟಿಸುವ ಮೂಲಕ ಹೋರಾಟದ ತೀವ್ರತೆಯನ್ನು ಹೆಚ್ಚಿಸಿದೆವು.

ಇಂದಿನ ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಕನ್ನಡಪ್ರಭ ವರದಿ:
ವಿಜಯಕರ್ನಾಟಕ ವರದಿ:
ಉದಯವಾಣಿ ವರದಿ:
ಪ್ರಜಾವಾಣಿ ವರದಿ:
ಈ ಸಂಜೆ ವರದಿ:
ಸಂಜೆವಾಣಿ ವರದಿ:

Wednesday, November 23, 2011

ಬೆಳಗಾವಿ: ನಾಡದ್ರೋಹಿಗಳ ಬಂಧನ ಮತ್ತು ಪಾಲಿಕೆ ವಿಸರ್ಜನೆಗೆ ಆಗ್ರಹಿಸಿ, ಸರ್ಕಾರದ ಧೋರಣೆ ಖಂಡಿಸಿ ತೀವ್ರಗೊಂಡ ಹೋರಾಟ

ನಾಡದ್ರೋಹಿಗಳಾದ ಬೆಳಗಾವಿ ಪಾಲಿಕೆಯ ಮೇಯರ್-ಉಪಮೇಯರ್ ಸದಸ್ಯತ್ವವನ್ನು ರದ್ದುಗೊಳಿಸದೇ, ನಗರ ಪಾಲಿಕೆಯನ್ನೂ ವಿಸರ್ಜಿಸದೇ ರಾಜ್ಯ ಸರ್ಕಾರವು ಮತ್ತೊಮ್ಮೆ ನೋಟೀಸ್ ಕಳಿಸುವ ಕಣ್ಣೊರೆಸುವ ತಂತ್ರವನ್ನೇ ಮುಂದುವರೆಸಿದ್ದು, ನಾಡದ್ರೋಹಿಗಳ ವಿರುದ್ಧ ಯಾವುದೇ ಕಠಿಣ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಸರ್ಕಾರದ ಈ ಬೇಜವಾಬ್ದಾರಿ ಧೋರಣೆಯನ್ನು ಖಂಡಿಸಿ ನಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದೇವೆ.

ಕಳೆದ ೫ ದಿನಗಳಿಂದ ಬೆಳಗಾವಿಯಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದು, ನೆನ್ನೆ (ನವೆಂಬರ್ ೨೪, ೨೦೧೧ ರಂದು) ಸಂಜೆ ಬೆಳಗಾವಿಯಲ್ಲಿ ರಾಜ್ಯ ಸರ್ಕಾರದ ಪ್ರತಿಕೃತಿಯನ್ನು ದಹಿಸುವ ಮೂಲಕ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದೆವು.

ನೆನ್ನೆಯ ಹೋರಾಟ ಮತ್ತು ಉಪವಾಸ ಸತ್ಯಾಗ್ರಹದ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಪ್ರಜಾವಾಣಿ ವರದಿ:

ಕನ್ನಡಪ್ರಭ ವರದಿ:
ಸಂಯುಕ್ತ ಕರ್ನಾಟಕ ವರದಿ:

Tuesday, November 22, 2011

ಬೆಳಗಾವಿ: ನಾಡದ್ರೋಹಿಗಳ ಬಂಧಿಸುವ ಮತ್ತು ಪಾಲಿಕೆ ವಿಸರ್ಜಿಸುವ ಬಗ್ಗೆ ಸರ್ಕಾರದ ಧೋರಣೆ ಖಂಡಿಸಿ ಉಪವಾಸ ಸತ್ಯಾಗ್ರಹ ಮತ್ತು ರಾಜ್ಯವ್ಯಾಪಿ ಪ್ರತಿಭಟನೆ

ಬೆಳಗಾವಿ ಮೇಯರ್-ಉಪಮೇಯರ್ ಸದಸ್ಯತ್ವ ರದ್ದುಗೊಳಿಸದೇ, ನಗರ ಪಾಲಿಕೆಯನ್ನು ವಿಸರ್ಜಿಸದೇ ಇರುವ ಸರ್ಕಾರದ ನಡೆಯನ್ನು ಖಂಡಿಸಿ, ಸರ್ಕಾರ ಕೂಡಲೆ ಈ ಕುರಿತು ಕ್ರಮ ಕೈಗೊಂಡು, ನಾಡದ್ರೋಹಿಗಳಿಗೆ ಕುಮ್ಮಕ್ಕು ನೀಡುವಂತ ಧೋರಣೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ನಾವು ರಾಜ್ಯವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದೇವೆ.

ಪ್ರತಿಭಟನೆಯ ಅಂಗವಾಗಿ, ಬೆಳಗಾವಿಯಲ್ಲಿ ಕಳೆದ ಮೂರು ದಿನಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದು, ಬೆಂಗಳೂರಿನಲ್ಲೂ ರಾಜ್ಯಸರ್ಕಾರದ ಕ್ರಮ ಖಂಡಿಸಿ ಇಂದು ಪ್ರತಿಭಟನೆ ನಡೆಸಿದೆವು.

ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹದ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಉದಯವಾಣಿ ವರದಿ:ವಿಜಯಕರ್ನಾಟಕ ವರದಿ:
ಪ್ರಜಾವಾಣಿ ವರದಿ:
ಕನ್ನಡಪ್ರಭ ವರದಿ:

ಈಸಂಜೆ ವರದಿ:

Tuesday, November 8, 2011

ಬೆಳಗಾವಿ: ನಾಡದ್ರೋಹಿಗಳ ಬಂಧನ ಮತ್ತು ಪಾಲಿಕೆ ವಿಸರ್ಜನೆಗೆ ಆಗ್ರಹಿಸಿ ನಡೆದ ಪ್ರತಿಭಟನೆ - ಪತ್ರಿಕಾ ವರದಿಗಳು

ಕನ್ನಡಿಗರಿಗೆ ಅವಮಾನಿಸಿ, ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿದ್ದ ಬೆಳಗಾವಿಯ ನಗರಪಾಲಿಕೆಯಲ್ಲಿರುವ ಮತ್ತು ಎಂ.ಇ.ಎಸ್. ನಲ್ಲಿರುವ ನಾಡದ್ರೋಹಿಗಳನ್ನು ಬಂಧಿಸಲು ಮತ್ತು ನಗರಪಾಲಿಕೆ ವಿಸರ್ಜಿಸಲು ಆಗ್ರಹಿಸಿ ನಾವು ನೆನ್ನೆ (ನವೆಂಬರ್ ೮, ೨೦೧೧ ರಂದು) ಬೆಂಗಳೂರಲ್ಲಿ ನಡೆಸಿದ ಬೃಹತ್ ಪ್ರತಿಭಟನಾ ನಡಿಗೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಕನ್ನಡಪ್ರಭ ವರದಿ:
ವಿಜಯಕರ್ನಾಟಕ ವರದಿ:

ಪ್ರಜಾವಾಣಿ ವರದಿ:

ಈಸಂಜೆ ವರದಿ:
ಸಂಜೆವಾಣಿ ವರದಿ:

ಬೆಳಗಾವಿ: ನಾಡದ್ರೋಹಿಗಳ ಬಂಧನ ಮತ್ತು ಪಾಲಿಕೆ ವಿಸರ್ಜನೆಗೆ ಆಗ್ರಹಿಸಿ ಬೃಹತ್ ಪ್ರತಿಭಟನಾ ನಡಿಗೆ

ರಾಜ್ಯೋತ್ಸವದ ದಿನ ಕರಾಳದಿನ ಆಚರಿಸಿ, ಕನ್ನಡಿಗರಿಗೆ ಅವಮಾನಿಸಿದ, ಮತ್ತು ಕರ್ನಾಟಕ ಸರ್ಕಾರಕ್ಕೇ ಸವಾಲು ಹಾಕಿರುವ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮಂದಾ ಬಾಳೇಕುಂದ್ರಿ, ಉಪಮೇಯರ್ ರೇಣುಕಿಲ್ಲೇಕರ ಹಾಗೂ ಎಂ.ಇ.ಎಸ್. ಮುಖಂಡ ಸಂಭಾಜಿ ಪಾಟೀಲ - ಈ ಎಲ್ಲಾ ನಾಡದ್ರೋಹಿಗಳನ್ನು ಕೂಡಲೆ ಬಂಧಿಸಿ, ಬೆಳಗಾವಿ ನಗರಪಾಲಿಕೆ ವಿಸರ್ಜಿಸುವಂತೆ ಆಗ್ರಹಿಸಿ ಇಂದು (ನವೆಂಬರ್ ೮, ೨೦೧೧ ರಂದು) ಬೆಂಗಳೂರಿನ ಬನ್ನಪ್ಪ ಪಾರ್ಕಿನಿಂದ ವಿಧಾನಸೌಧದವರೆಗೆ ಬೃಹತ್ ಪ್ರತಿಭಟನಾ ನಡಿಗೆ ಮಾಡಿದೆವು.

ಪ್ರತಿಭಟನೆಯಲ್ಲಿ ನಮ್ಮ ನೂರಾರು ಕಾರ್ಯಕರ್ತರು, ನಾಡಿನ ಸಾಹಿತಿಗಳು, ರೈತ, ದಲಿತ ಸಂಘಟನೆಗಳ ನಾಯಕರು, ಅನೇಕ ಕನ್ನಡಪರ ಚಿಂತಕರು, ಕನ್ನಡ ಚಲನಚಿತ್ರರಂಗದವರು, ಮುಂತಾದ ಗಣ್ಯರು ಪಾಲ್ಗೊಂಡಿದ್ದರು. ಇವರೆಲ್ಲರ ತಂಡದೊಂದಿಗೆ ನಮ್ಮ ಮನವಿಪತ್ರವನ್ನು ರಾಜ್ಯಸರ್ಕಾರಕ್ಕೆ ಸಲ್ಲಿಸಿ, ಸರ್ಕಾರ ಕೂಡಲೆ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆವು.

ಸರ್ಕಾರಕ್ಕೆ ನಾವು ಸಲ್ಲಿಸಿದ ಮನವಿ ಪತ್ರವನ್ನು ಕೆಳಗೆ ನೋಡಿ:


Monday, November 7, 2011

ಬೆಳಗಾವಿ: ನಾಡವಿರೋಧಿ ಮೇಯರ್, ಉಪಮೇಯರ್ ಅವರನ್ನು ಬಂಧಿಸಲು ಮತ್ತು ನಗರಪಾಲಿಕೆ ವಿಸರ್ಜಿಸಲು ಒತ್ತಾಯಿಸಿ ನಾಳೆ ಬೃಹತ್ ಜಾಥಾ

ನಾಡವಿರೋಧಿ ಎಂ.ಇ.ಎಸ್. ಪರವಹಿಸಿ, ಕನ್ನಡಿಗರು ಹಾಗೂ ಕರ್ನಾಟಕ ಸರ್ಕಾರಕ್ಕೆ ಸವಾಲಾಕಿರುವ ಬೆಳಗಾವಿ ಪಾಲಿಕೆಯ ಮೇಯರ್ ಮಂದಾ ಬಾಳೇಕುಂದ್ರಿ, ಉಪಮೇಯರ್ ರೇಣುಕಿಲ್ಲೇಕರ, ಹಾಗೂ ಸಂಭಾಜಿ ಪಾಟೀಲ್ ನಂತಹ ನಾಡದ್ರೋಹಿಗಳನ್ನು ಕೂಡಲೆ ಬಂಧಿಸಿ, ಬೆಳಗಾವಿ ಮಹಾನಗರ ಪಾಲಿಕೆ ವಿಸರ್ಜನೆ ಮಾಡಬೇಕೆಂದು ರಾಜ್ಯಸರ್ಕಾರವನ್ನು ಒತ್ತಾಯಿಸಿ, ನಾಳೆ (ನವೆಂಬರ್ ೮, ೨೦೧ ರಂದು) ಬೆಳಿಗ್ಗೆ ೧೧.೩೦ ಕ್ಕೆ ಬೆಂಗಳೂರಿನ ಬನ್ನಪ್ಪ ಪಾರ್ಕನಿಂದ ವಿಧಾನಸೌಧದವರೆಗೆ ಬೃಹತ್ ಜಾಥಾ ನಡೆಸುತ್ತಿದ್ದೇವೆ.

ಕನ್ನಡದ ಮನೆಗಳಿಗೆ ಬೆಂಕಿ ಬಿದ್ದಿರುವಂತ ಈ ಸಂದರ್ಭದಲ್ಲಿ, ಈ ಜಾಥಾದಲ್ಲಿ ತಾವೆಲ್ಲಾ ಭಾಗವಹಿಸಿ, ರಾಜ್ಯಸರ್ಕಾರದ ಮೇಲೆ ಒತ್ತಡ ಹೇರಿ, ನಾಡದ್ರೋಹಿಗಳಿಗೆ ತಕ್ಕ ಪಾಠ ಕಲಿಸಲು ಮುಂದಾಗಿ ಎಂದು ಈ ಮೂಲಕ ಎಲ್ಲ ಕನ್ನಡಿಗರಿಗೆ ಕರೆ ನೀಡುತಿದ್ದೇವೆ. ಪ್ರತಿಭಟನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಕೆಳಗಿನ ಚಿತ್ರದಲ್ಲಿ ನೋಡಿ:

Thursday, November 3, 2011

ಕರಾಳ ದಿನ ಆಚರಿಸಿದ ಎಂ.ಇ.ಎಸ್. ವರ್ತನೆ ಮತ್ತು ಬೆಳಗಾವಿ ಮೇಯರ್ ಮತ್ತು ಉಪಮೇಯರ್ ರವರ ನಾಡದ್ರೋಹಿ ಧೋರಣೆ ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆ

ನಿರಂತರವಾಗಿ ನಾಡವಿರೋಧಿ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿರುವ ಎಂ.ಇ.ಎಸ್. ಅನ್ನು ನಿಗ್ರಹಿಸದೆ, ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಅವರೇ ರಾಜ್ಯೋತ್ಸವದಂದು ಕರಾಳ ದಿನಾಚಾರಣೆ ಆಚರಿಸಿ, ನಾಡ ವಿರೋಧಿ ನಿಲುವನ್ನು ತಳೆದಿರುವುದನ್ನು ಖಂಡಿಸಿ ರಾಜ್ಯಾದ್ಯಂತ ನವೆಂಬರ್ ೩, ೨೦೧೧ ರಂದು ಪ್ರತಿಭಟನೆ ನಡೆಸಿದೆವು.

ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಪ್ರಜಾವಾಣಿ ವರದಿ:

ಕನ್ನಡ ಪ್ರಭ ವರದಿ:



ವಿಜಯ ಕರ್ನಾಟಕ ವರದಿ:

ಉದಯವಾಣಿ ವರದಿ:

ಈ ಸಂಜೆ ವರದಿ:
ಸಂಜೆವಾಣಿ ವರದಿ: