Tuesday, November 8, 2011

ಬೆಳಗಾವಿ: ನಾಡದ್ರೋಹಿಗಳ ಬಂಧನ ಮತ್ತು ಪಾಲಿಕೆ ವಿಸರ್ಜನೆಗೆ ಆಗ್ರಹಿಸಿ ಬೃಹತ್ ಪ್ರತಿಭಟನಾ ನಡಿಗೆ

ರಾಜ್ಯೋತ್ಸವದ ದಿನ ಕರಾಳದಿನ ಆಚರಿಸಿ, ಕನ್ನಡಿಗರಿಗೆ ಅವಮಾನಿಸಿದ, ಮತ್ತು ಕರ್ನಾಟಕ ಸರ್ಕಾರಕ್ಕೇ ಸವಾಲು ಹಾಕಿರುವ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮಂದಾ ಬಾಳೇಕುಂದ್ರಿ, ಉಪಮೇಯರ್ ರೇಣುಕಿಲ್ಲೇಕರ ಹಾಗೂ ಎಂ.ಇ.ಎಸ್. ಮುಖಂಡ ಸಂಭಾಜಿ ಪಾಟೀಲ - ಈ ಎಲ್ಲಾ ನಾಡದ್ರೋಹಿಗಳನ್ನು ಕೂಡಲೆ ಬಂಧಿಸಿ, ಬೆಳಗಾವಿ ನಗರಪಾಲಿಕೆ ವಿಸರ್ಜಿಸುವಂತೆ ಆಗ್ರಹಿಸಿ ಇಂದು (ನವೆಂಬರ್ ೮, ೨೦೧೧ ರಂದು) ಬೆಂಗಳೂರಿನ ಬನ್ನಪ್ಪ ಪಾರ್ಕಿನಿಂದ ವಿಧಾನಸೌಧದವರೆಗೆ ಬೃಹತ್ ಪ್ರತಿಭಟನಾ ನಡಿಗೆ ಮಾಡಿದೆವು.

ಪ್ರತಿಭಟನೆಯಲ್ಲಿ ನಮ್ಮ ನೂರಾರು ಕಾರ್ಯಕರ್ತರು, ನಾಡಿನ ಸಾಹಿತಿಗಳು, ರೈತ, ದಲಿತ ಸಂಘಟನೆಗಳ ನಾಯಕರು, ಅನೇಕ ಕನ್ನಡಪರ ಚಿಂತಕರು, ಕನ್ನಡ ಚಲನಚಿತ್ರರಂಗದವರು, ಮುಂತಾದ ಗಣ್ಯರು ಪಾಲ್ಗೊಂಡಿದ್ದರು. ಇವರೆಲ್ಲರ ತಂಡದೊಂದಿಗೆ ನಮ್ಮ ಮನವಿಪತ್ರವನ್ನು ರಾಜ್ಯಸರ್ಕಾರಕ್ಕೆ ಸಲ್ಲಿಸಿ, ಸರ್ಕಾರ ಕೂಡಲೆ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆವು.

ಸರ್ಕಾರಕ್ಕೆ ನಾವು ಸಲ್ಲಿಸಿದ ಮನವಿ ಪತ್ರವನ್ನು ಕೆಳಗೆ ನೋಡಿ: