Friday, November 28, 2014

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಡೆದ ಜನಪದ ಸಂಭ್ರಮ ಮತ್ತು ಕರ್ನಾಟಕ ರಾಜ್ಯೋತ್ಸವ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷ ಬಸನಗೌಡ ಪೋಲೀಸ ಪಾಟೀಲ ಅವರ ನೇತೃತ್ವದಲ್ಲಿ ನಡೆದ ಜನಪದ ಸಂಭ್ರಮ ಮತ್ತು ಕರ್ನಾಟಕ ರಾಜ್ಯೋತ್ಸವ ಆಚರಣೆಯ ಚಿತ್ರಗಳು. 






Friday, November 14, 2014

ಗದಗ ಜಿಲ್ಲೆಯ ಗಂಗೀಮಡಿಯಲ್ಲಿ ಮೂಲಭೂತ ಸೌಕರ್ಯಕ್ಕೆ ಆಗ್ರಹ

ಗದಗ ಜಿಲ್ಲೆಯ ಗಂಗೀಮಡಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ಘಟಕದ ವತಿಯಿಂದ ನಗರಸಭಾ ಅಧ್ಯಕ್ಷರಿಗೆ ಮನವಿ ಸಲ್ಲಿಸಾಯಿತು.







ಬೆಳಗಾವಿ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರದ ಪ್ರತಿನಿಧಿಗಳಿಗೆ ಮನವಿ ಪತ್ರ

ಡೀಸಲ್ ದರ ಇಳಿದಿರುವರಿಂದ ಬಸ್ ದರವನ್ನು ಇಳಿಸುವಂತೆ ಮತ್ತು ಜಿಲ್ಲೆಯ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರದ ಪ್ರತಿನಿಧಿಗಳಿಗೆ ಮನವಿ ಪತ್ರವನ್ನು ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾಧ್ಯಕ್ಷ ಮಹದೇವ ತಳವಾರ ನೇತೃತ್ವದಲ್ಲಿ ನಮ್ಮ ಕಾರ್ಯಕರ್ತರು ಸಲ್ಲಿಸಿದರು







ಕೊಡಗು ಜಿಲ್ಲೆಯ ಕೊಡ್ಲಿಪೇಟೆಯಲ್ಲಿ ರಾಜ್ಯೋತ್ಸವ ಆಚರಣೆ

ಕರ್ನಾಟಕ ರಕ್ಷಣಾ ವೇದಿಕೆಯ ಆಶ್ರಯದಲ್ಲಿ ಕೊಡಗು ಜಿಲ್ಲೆಯ ಕೊಡ್ಲಿಪೇಟೆಯಲ್ಲಿ ರಾಜ್ಯೋತ್ಸವವನ್ನು ಆಚರಿಸಲಾಯಿತು. ನೂರಾರು ಜನಸಾಮಾನ್ಯರಿಗೆ ರಕ್ತ ಪರಿಶೀಲನೆ ಮತ್ತು ರಕ್ತದ ಗುಂಪಿನ ಪ್ರಮಾಣಪತ್ರವನ್ನು ಕೊಡಲಾಯಿತು. ನಮ್ಮ ಈ ಕಾರ್ಯಕ್ರಮದ ಪತ್ರಿಕಾ ವರದಿ ಇಲ್ಲಿದೆ.



Thursday, November 13, 2014

ಬಾಗಲಕೋಟೆ ಜಿಲ್ಲೆಯ ಅಮೀನಗಡದಲ್ಲಿನ ಹಿರೇಮಾಗಿ ಗ್ರಾಮ ಘಟಕದ ಉದ್ಘಾಟನೆ

ಬಾಗಲಕೋಟೆ ಜಿಲ್ಲೆಯ ಅಮೀನಗಡದಲ್ಲಿನ ಹಿರೇಮಾಗಿ ಗ್ರಾಮ ಘಟಕದ ಉದ್ಘಾಟನೆಯ ಪತ್ರಿಕಾ ವರದಿ. ಬಾಗಲಕೋಟೆ ಜಿಲ್ಲಾಧ್ಯಕ್ಷ ರಮೇಶ್ ಬದ್ನೂರ್ ನೇತೃತ್ವದಲ್ಲಿ ಶಾಖೆಯ ಉದ್ಘಾಟನೆ ನೆರೆವೇರಿತು.




ಬೆಳಗಾವಿ ಜಿಲ್ಲೆಯ ದಡ್ಡಿ-ರಾಮೇವಾಡಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಹೊಸ ಶಾಖೆ ಉದ್ಘಾಟನೆ

ಬೆಳಗಾವಿ ಜಿಲ್ಲೆಯ ದಡ್ಡಿ-ರಾಮೇವಾಡಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಹೊಸ ಶಾಖೆಯನ್ನು ಉದ್ಘಾಟನೆ ಮಾಡಲಾಯಿತು.