Wednesday, July 29, 2009

ಕಾಳಿ ನದಿಯಿಂದ ಮರಳು ಅಕ್ರಮವಾಗಿ ಮಾಲ್ಡೀವ್ಸ್ ದ್ವೀಪಕ್ಕೆ ರಫ್ತು ಮಾಡುವುದನ್ನು ತಡೆದ ಕ.ರ.ವೇ.

ಕಾಳಿ ನದಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿ ಮರಳನ್ನು ಮಾಲ್ಡೀವ್ಸ್ ದ್ವೀಪಕ್ಕೆ ಕಾರವಾರದಿಂದ ರಫ್ತು ಮಾಡುವುದನ್ನು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಡೆದು ಹಾಕುವಲ್ಲಿ ಯಶಸ್ವಿಯಾದರು.

ಇದರ ವರದಿಯನ್ನು ಇಲ್ಲಿ ನೋಡಿ


Sunday, July 26, 2009

"ಸಿಂಹ ಘರ್ಜನೆ" - ಟಿ.ಏ. ನಾರಾಯಣ ಗೌಡರ ಬದುಕು, ಹೋರಾಟದ ಹಾದಿಯ ಬಗ್ಗೆ ಬರೆದಿರುವ ಪುಸ್ತಕ ಬಿಡುಗಡೆ ಸಮಾರಂಭ

"ಸಿಂಹ ಘರ್ಜನೆ" - ಟಿ.ಏ. ನಾರಾಯಣ ಗೌಡರ ಬದುಕು, ಹೋರಾಟದ ಹಾದಿಯ ಬಗ್ಗೆ ಬರೆದಿರುವ ಪುಸ್ತಕ ಬಿಡುಗಡೆ ಸಮಾರಂಭ.

ಸ್ಥಳ - ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಂಗಳೂರು 560002

ದಿನಾಂಕ: 01-08-09 ರಂದು ಸಂಜೆ 6:30 ಕ್ಕೆ



ಕೇಂದ್ರ ರೈಲ್ವೇ ಬಡ್ಜೆಟ್ನಲ್ಲಿ ಕರ್ನಾಟಕದ ಕರಾವಳಿಗೆ ಅನ್ಯಾಯ - ಪ್ರತಿಭಟನೆ

ಬೆಂಗಳೂರು ಮಂಗಳೂರು ರೈಲನ್ನು ಕೇರಳದ ಕಣ್ಣೂರಿನವರೆಗು ವಿಸ್ತರಿಸಿರುವುದನ್ನು ಖಂಡಿಸಿ ಮತ್ತು ಕರ್ನಾಟಕದ ಕರಾವಳಿ ಪ್ರದೇಶಗಳಿಗೆ ರೈಲಿನ ಸಂಪರ್ಕದಲ್ಲಿ ಕೇಂದ್ರ ಸರ್ಕಾರ ತೋರುತ್ತಿರುವ ಮಲತಾಯಿ ಧೋರಣೆ ವಿರುದ್ಧ ಮಂಗಳೂರು ಕೇಂದ್ರ ರೈಲ್ವೇ ನಿಲ್ದಾಣದ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜುಲೈ 24 ರಂದು ಪ್ರತಿಭಟನೆ ನಡೆಸಿದರು. ನಂತರ ಕೇಂದ್ರ ರೈಲ್ವೇ ಮಂತ್ರಿಗಳಿಗೆ ಕೊಡುವಂತೆ ಮಂಗಳೂರು ಕೇಂದ್ರ ರೈಲ್ವೇ ನಿಲ್ದಾಣದ ಸ್ಟೇಷಾನ್ ಮಾಸ್ಟರ್ ಕೈಗೆ ಮನವಿ ಪತ್ರವನ್ನು ಕೊಟ್ಟರು.

ಇದರ ವರದಿಯನ್ನು ಇಲ್ಲಿ ನೋಡಿ





Sunday, July 19, 2009

ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಕುರಿತಂತೆ ನಡೆದ ಖಂಡನಾ ಸಭೆಯಲ್ಲಿ ತೆಗೆದು ಕೊಂಡಂತ ನಿರ್ಣಾಯಗಳು

ಬೆಂಗಳೂರಿನಲ್ಲಿ ಜುಲೈ ೧೮ ರಂದು ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಕುರಿತಂತೆ ನಡೆದ ಖಂಡನಾ ಸಭೆಯಲ್ಲಿ ರಾಜ್ಯದ ಕನ್ನಡ ಪರ ಚಿಂತಕರ ಎದುರಿನಲ್ಲಿ ನಮ್ಮ ವೇದಿಕೆ ನಾಲ್ಕು ನಿರ್ಣಾಯಗಳನ್ನು ತೆಗೆದುಕೊಂಡಿತು.

ಇದರ ಪತ್ರಿಕಾ ಹೇಳಿಕೆಯನ್ನು ಇಲ್ಲಿ ನೋಡಿ.




ಇದರ ವರದಿಯನ್ನು ಇಲ್ಲಿ ನೋಡಿ.




Thursday, July 16, 2009

ತಿರುವಳ್ಳುವರ್ ಪ್ರತಿಮೆಗೆ ಷರತ್ತು ಬದ್ಧ ಅವಕಾಶ

ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯಾಗಬೇಕೆಂದರೆ, ತಮಿಳುನಾಡಿನಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕೊಡುವುದರ ವಿರುದ್ಧ ಹಾಕಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿಂಪಡೆಯಬೇಕು ಮತ್ತು ಸರ್ವಜ್ಞ ಮೂರ್ತಿಯ ಪ್ರತಿಮೆಯನ್ನು ಚೆನ್ನೈನ ಪ್ರಮುಖ ಜಾಗದಲ್ಲಿ ಸ್ಥಾಪಿಸಬೇಕು ಎಂದು ನಮ್ಮ ರಾಜ್ಯಾಧ್ಯಕ್ಷರು ಹೇಳಿದರು.

ಇದರ ವರದಿಯನ್ನು ಇಲ್ಲಿ ನೋಡಿ.




Thursday, July 9, 2009

ಪ್ರಾದೇಶಿಕ ಪಕ್ಷದಿಂದ ಮಾತ್ರ ಪ್ರಾದೇಶಿಕ ಚಿಂತನೆ ಸಾದ್ಯ

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಉದಯಿಸಿದಲ್ಲಿ ಮಾತ್ರ ಪ್ರಾದೇಶಿಕ ಚಿಂತನೆ ಹೊರಹೊಮ್ಮಲು ಸಾದ್ಯ ಎಂದು ನಮ್ಮ ರಾಜ್ಯಾಧ್ಯಕ್ಷರು ಹೇಳಿದರು.

ಇದರ ವರದಿಯನ್ನು ಇಲ್ಲಿ ನೋಡಿ.

ಸರ್ವಜ್ಞನ ಪ್ರತಿಮೆ ಚೆನ್ನೈನ ಮುಖ್ಯ ಜಾಗದಲ್ಲಿ ಅನಾವರಣಗೊಳ್ಳಬೇಕು - ಕ.ರ.ವೇ.

ಸರ್ವಜ್ಞನ ಪ್ರತಿಮೆ ಚೆನ್ನೈನ ಮುಖ್ಯ ಜಾಗದಲ್ಲಿ ಅನಾವರಣಗೊಳ್ಳಬೇಕು
ಎಂದು ನಮ್ಮ ಅಧ್ಯಕ್ಷರು ಕಾರವಾರದಲ್ಲಿ ಪತ್ರಿಕಾ ಹೇಳಿಕೆ ನೀಡಿದರು.

ಇದರ ವರದಿಯನ್ನು ಇಲ್ಲಿ ನೋಡಿ.

Thursday, July 2, 2009

ಹೊಗೇನಕಲ್ - ತಮಿಳುನಾಡು ವಿರುದ್ಧ ಚಾಮರಾಜನಗರದಲ್ಲಿ ಪ್ರತಿಭಟನೆ

ಕರ್ನಾಟಕದ ನಡೂಗಡ್ಡೆಯಾದ ಹೊಗೇನಕಲ್ ಪ್ರದೇಶವನ್ನು ತಮಿಳುನಾಡು ಅತಿಕ್ರಮವಾಗಿ ಒತ್ತುವರಿ ಮಾಡಿಕೊಂಡಿದೆ. ಅದರ ವಿರುದ್ಧ ನಮ್ಮ ಕಾರ್ಯಕರ್ತರು ಚಾಮರಾಜನಗರದಲ್ಲಿ ದೊಡ್ಡ ಪ್ರತಿಭಟನೆ ನಡೆಸಿದರು.

ಇದರ ವರದಿಯನ್ನು ಇಲ್ಲಿ ನೋಡಿ