Wednesday, April 2, 2014

ಕರ್ನಾಟಕದಲ್ಲಿರುವ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡದ ಕಡ್ಡಾಯ ಬಳಕೆಗೆ ಆಗ್ರಹ

ಕರ್ನಾಟಕದಲ್ಲಿರುವ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡದ ಕಡ್ಡಾಯ ಬಳಕೆಯ ವಿಚಾರದಲ್ಲಿ ಕರ್ನಾಟಕ ಸರಕಾರ ದಿಟ್ಟ ಹೆಜ್ಜೆಯನ್ನಿಡುವಂತೆ ಒತ್ತಾಯಿಸುವ ಕರವೇ ಪತ್ರಿಕಾ ಪ್ರಕಟಣೆ.




ಬೆಂಗಳೂರಿನ ನಮ್ಮ ಮೆಟ್ರೋ ದಲ್ಲಿ ಹಿಂದಿ ಹೇರಿಕೆ ನಿಲ್ಲಿಸಲು ಆಗ್ರಹ ಪತ್ರ

ಬೆಂಗಳೂರು ಮೆಟ್ರೋ ನಡೆಸುತ್ತಿರುವ ಹಿಂದಿ ಹೇರಿಕೆಯನ್ನು ವಿರೋಧಿಸಿ ಹಾಗು ಬೆಂಗಳೂರು ಮೆಟ್ರೋನಲ್ಲಿರುವ ಉದ್ಯೋಗಗಳನ್ನ ಕನ್ನಡಿಗರಿಗೇ ನೀಡಬೇಕೆಂದು ಆಗ್ರಹಿಸಿ ನಾರಾಯಣಗೌಡರ ನೇತೃತ್ವದಲ್ಲಿ ಕರವೇಯ ಒಂದು ನಿಯೋಗ ಇಂದು ಬೆಂಗಳೂರು ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕರನ್ನ ಭೇಟಿ ಮಾಡಿತು. ಅತಿ ತುರ್ತಾಗಿ ರಾಜ್ಯ ಸರಕಾರದ ಜೊತೆ ಇದರ ಬಗ್ಗೆ ಮಾತುಕತೆ ನಡೆಸಿ ಕನ್ನಡ ಪರವಾದ ನಿರ್ಧಾರ ತೆಗೆದುಕೊಳ್ಳುವೆವು ಎಂಬ ಆಶ್ವಾಸನೆಯನ್ನ ಬೆಂಗಳೂರು ಮೆಟ್ರೋದ ಆಡಳಿತ ಮಂಡಳಿ ನೀಡಿದೆ. ಕೆಲವು ದಿನಗಳ ಸಮಯ ಅವರಿಗೆ ನೀಡಿದ್ದು ಬೆಂಗಳೂರು ಮೆಟ್ರೋನವರು ಕನ್ನಡ - ಕನ್ನಡಿಗ ಪರವಾದ ಕ್ರಮಗಳನ್ನ ಕೈಗೊಳ್ಳದಿದ್ದರೆ ಮುಂದೆ ಉಗ್ರವಾದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಬೆಂಗಳೂರು ಮೆಟ್ರೋದ ಆಡಳಿತ ಮಂಡಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ.