Monday, November 7, 2011

ಬೆಳಗಾವಿ: ನಾಡವಿರೋಧಿ ಮೇಯರ್, ಉಪಮೇಯರ್ ಅವರನ್ನು ಬಂಧಿಸಲು ಮತ್ತು ನಗರಪಾಲಿಕೆ ವಿಸರ್ಜಿಸಲು ಒತ್ತಾಯಿಸಿ ನಾಳೆ ಬೃಹತ್ ಜಾಥಾ

ನಾಡವಿರೋಧಿ ಎಂ.ಇ.ಎಸ್. ಪರವಹಿಸಿ, ಕನ್ನಡಿಗರು ಹಾಗೂ ಕರ್ನಾಟಕ ಸರ್ಕಾರಕ್ಕೆ ಸವಾಲಾಕಿರುವ ಬೆಳಗಾವಿ ಪಾಲಿಕೆಯ ಮೇಯರ್ ಮಂದಾ ಬಾಳೇಕುಂದ್ರಿ, ಉಪಮೇಯರ್ ರೇಣುಕಿಲ್ಲೇಕರ, ಹಾಗೂ ಸಂಭಾಜಿ ಪಾಟೀಲ್ ನಂತಹ ನಾಡದ್ರೋಹಿಗಳನ್ನು ಕೂಡಲೆ ಬಂಧಿಸಿ, ಬೆಳಗಾವಿ ಮಹಾನಗರ ಪಾಲಿಕೆ ವಿಸರ್ಜನೆ ಮಾಡಬೇಕೆಂದು ರಾಜ್ಯಸರ್ಕಾರವನ್ನು ಒತ್ತಾಯಿಸಿ, ನಾಳೆ (ನವೆಂಬರ್ ೮, ೨೦೧ ರಂದು) ಬೆಳಿಗ್ಗೆ ೧೧.೩೦ ಕ್ಕೆ ಬೆಂಗಳೂರಿನ ಬನ್ನಪ್ಪ ಪಾರ್ಕನಿಂದ ವಿಧಾನಸೌಧದವರೆಗೆ ಬೃಹತ್ ಜಾಥಾ ನಡೆಸುತ್ತಿದ್ದೇವೆ.

ಕನ್ನಡದ ಮನೆಗಳಿಗೆ ಬೆಂಕಿ ಬಿದ್ದಿರುವಂತ ಈ ಸಂದರ್ಭದಲ್ಲಿ, ಈ ಜಾಥಾದಲ್ಲಿ ತಾವೆಲ್ಲಾ ಭಾಗವಹಿಸಿ, ರಾಜ್ಯಸರ್ಕಾರದ ಮೇಲೆ ಒತ್ತಡ ಹೇರಿ, ನಾಡದ್ರೋಹಿಗಳಿಗೆ ತಕ್ಕ ಪಾಠ ಕಲಿಸಲು ಮುಂದಾಗಿ ಎಂದು ಈ ಮೂಲಕ ಎಲ್ಲ ಕನ್ನಡಿಗರಿಗೆ ಕರೆ ನೀಡುತಿದ್ದೇವೆ. ಪ್ರತಿಭಟನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಕೆಳಗಿನ ಚಿತ್ರದಲ್ಲಿ ನೋಡಿ: