Friday, July 8, 2011

ಹೆಚ್.ಎ.ಎಲ್. ನೇಮಕಾತಿಯಲ್ಲಿ ಕನ್ನಡಿಗರಿಗೇ ಆದ್ಯತೆ ಕೊಡಬೇಕೆಂದು ಪ್ರತಿಭಟನೆ

ಹೆಚ್.ಎ.ಎಲ್ . ಬೆಂಗಳೂರು ವಿಭಾಗದ ಹಲವಾರು ಘಟಕಗಳಿಗೆ ಹೊಸದಾಗಿ ನೇಮಕಾತಿ ನಡೆಸಲು ಹೆಚ್.ಎ.ಎಲ್. ಮುಂದಾಗಿದ್ದು, ಸುಮಾರು 677 ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕರೆ ನೀಡಿದೆ. ಕರೆದಿರುವ ಬಹುತೇಕ ಎಲ್ಲ ಹುದ್ದೆಗಳಿಗೂ ಡಿಪ್ಲಮೋ ಅಥವಾ ಐ.ಟಿ.ಐ. ಪಾಸಾಗಿರುವ ಅಭ್ಯರ್ಥಿಗಳೇ ಬೇಕಾಗಿದ್ದು, ಆ ಎಲ್ಲ ತರಹದ ಹುದ್ದೆಗಳಿಗೂ ಸರೋಜಿನಿ ಮಹಿಷಿ ವರದಿಯ ಆಧಾರದ ಮೇಲೆ ಸ್ಥಳೀಯರಿಗೇ ಆದ್ಯತೆ ನೀಡಬೇಕಿತ್ತು ಮತ್ತು ಅದಕ್ಕೆ ಪೂರಕವಾಗಿ ಕರ್ನಾಟಕದ "ಉದ್ಯೋಗ ವಿನಿಮಯ ಕೇಂದ್ರದಲ್ಲಿ" ನೊಂದಾಯಿಸಿರುವ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಾಗುವುದೆಂದು ನಿಯಮ ಮಾಡಬೇಕಿತ್ತು. ಆದರೆ ಇದಾವುದನ್ನೂ ಮಾಡಲಾಗಿಲ್ಲ.

ಇಂತಹದೇ ನೇಮಕಾತಿ ಆಂಧ್ರಪ್ರದೇಶದ ಹೆಚ್.ಎ.ಎಲ್. ಘಟಕದಲ್ಲಿ ನಡೆದಾಗ, ಆಂಧ್ರಪ್ರದೇಶದ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೊಂದಾಯಿಸಿದ್ದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು ಎಂಬ ನಿಯಮ ಮಾಡಲಾಗಿತ್ತು. ಅದೇ ಕ್ರಮ ಇಲ್ಲಿನ ನೇಮಕಾತಿಯಲ್ಲಿ ಕೈಗೊಂಡಿಲ್ಲ. ಇವೆಲ್ಲದುರ ವಿರುದ್ಧ ಧ್ವನಿ ಎತ್ತುತ್ತಾ, ಎಲ್ಲಾ 677 ಹುದ್ದೆಗಳನ್ನು ಕನ್ನಡಿಗರಿಗೇ ಕೊಡಬೇಕೆಂದು ಒತ್ತಾಯಿಸಿ ನಮ್ಮ ವೇದಿಕೆಯ ವತಿಯಿಂದ ಬೆಂಗಳೂರಿನಲ್ಲಿರುವ ಹೆಚ್.ಎ.ಎಲ್ ಪ್ರಾಧಾನ ಕಛೇರಿ ಎದುರು ಜುಲೈ 8, 2011 ರಂದು ಪ್ರತಿಭಟನೆ ನಡೆಸಿದೆವು.

ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:









ಹೆಚ್.ಎ.ಎಲ್ ಗೆ ನೀಡಿದ ಮನವಿ ಪತ್ರ-