Monday, July 11, 2011

ಹೆಚ್.ಎ.ಎಲ್. ನಲ್ಲಿ ಕನ್ನಡಿಗರಿಗೆ ಉದ್ಯೋಗ ಮತ್ತು ಗದಗ ಜಿಲ್ಲೆಯ ರೈತರ ಭೂ-ಕಬಳಿಕೆ ನಿಲ್ಲಿಸಬೇಕೆಂದು ಒತ್ತಾಯಿಸಿ ಕರವೇಯಿಂದ ಕಾಲ್ನಡಿಗೆ ಜಾಥಾ

ಕಳೆದ ವಾರ ಹೆಚ್.ಎ.ಎಲ್. ಬೆಂಗಳೂರಿನ ಘಟಕದಲ್ಲಿನ ಹೊಸ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಿಕೊಳ್ಳಬೇಕೆಂದು ಹೆಚ್.ಎ.ಎಲ್. ಪ್ರಧಾನ ಕಚೇರಿ ಎದುರು ನಡೆಸಿದ ಪ್ರತಿಭಟನೆಯನ್ನು ಇಂದೂ ಕೂಡ ಮುಂದುವರಿಸಲಾಯಿತು. ಆದರೆ ಈ ಬಾರಿ ನಮ್ಮ ಬೇಡಿಕೆಗಳನ್ನು ರಾಜ್ಯಪಾಲರಿಗೆ ಮನವಿಯಾಗಿ ಸಲ್ಲಿಸುವ ಮೂಲಕ ನಮ್ಮ ಹೋರಾಟವನ್ನು ಮುಂದುವರಿಸಿದೆವು.

ಹಾಗೆಯೇ, ರಾಜ್ಯದ ಗದಗ ಜಿಲ್ಲೆಯ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಖಾಸಗಿ ಕಂಪನಿಗಳಿಗಾಗಿ ವಶಪಡಿಸಿಕೊಳ್ಳುತ್ತಿರುವ ಸರ್ಕಾರದ ಕ್ರಮವು ನಿಲ್ಲಬೇಕು ಎಂದು ಒತ್ತಾಯಿಸಿ ನಮ್ಮ ವೇದಿಕೆಯ ವತಿಯಿಂದ ಇಂದು (ಜುಲೈ ೧೧, ೨೦೧೧ ರಂದು) ರಾಜಭವನಕ್ಕೆ ಕಾಲ್ನಡಿಗೆ ಜಾಥಾ ನಡೆಸುವ ಮೂಲಕ ಪ್ರತಿಭಟನೆ ನಡೆಸಿದೆವು.

ಈ ಕುರಿತು ಪತ್ರಿಕಾ ವರದಿಗಳು ಮತ್ತು ನಮ್ಮ ಮನವಿ ಪತ್ರಗಳನ್ನು ನೋಡಿ:



ಮನವಿ ಪತ್ರಗಳು