Sunday, December 21, 2008

ರೈಲ್ವೆ ಹುದ್ದೆಗಳ ನೇಮಕಾತಿ - ಸರಿಯಾದ ವ್ಯವಸ್ಥೆ ಹೇಗಿರಬೇಕು?

ರೈಲ್ವೆ ಮಂತ್ರಿ ಲಾಲೂ ಪ್ರಸಾದ ಯಾದವ್, ರೈಲ್ವೆ ಇಲಾಖೆಯನ್ನು ತನ್ನ ಖಾಸಗಿ ಆಸ್ತಿ ಎನ್ನುವಂತೆ ಬಳಸಿ, ನ್ಯಾಯಸಮ್ಮತವಾಗಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಸಿಗಬೇಕಾದ ರೈಲ್ವೆ ಹುದ್ದೆಗಳನ್ನು ಬಿಹಾರಿಗಳ ಪಾಲಾಗಿಸುವ ಸಂಚನ್ನು ಮಾಡಿದಾಗ, ಅದರ ವಿರುದ್ಧ ರಾಜ್ಯವ್ಯಾಪಿ ಜನಾಂದೋಲನ ರೂಪಿಸಿ, ಅದನ್ನು ನಿಲ್ಲಿಸಿದ್ದು ಕ.ರ.ವೇ ಹೋರಾಟ. ಭಾರತದ ಎಲ್ಲ ರಾಜ್ಯದಲ್ಲೂ, ಎಲ್ಲ ರೈಲ್ವೆ ವಲಯದಲ್ಲೂ ಒಂದೇ ದಿನ ನೇಮಕಾತಿ ನಡೆಸಬೇಕು, ಆ ಮೂಲಕ ಪ್ರತಿ ರಾಜ್ಯದ ರೈಲ್ವೆ ವಲಯದಲ್ಲೂ, ಆಯಾ ರಾಜ್ಯದ ಜನರಿಗೆ ಉದ್ಯೋಗದಲ್ಲಿ ಸಮಾನ ಅವಕಾಶ ಸಿಗುತ್ತೆ ಎಂದು ಸರಿಯಾದ ಒಕ್ಕೂಟ ವ್ಯವಸ್ಥೆಯಲ್ಲಿ ಉದ್ಯೋಗವಕಾಶದ ಹಂಚಿಕೆ ಹೇಗಿರಬೇಕು ಎನ್ನುವ ಬಗ್ಗೆ, ರೈಲ್ವೇ ಹೋರಾಟದ ಸಂಧರ್ಭದಲ್ಲಿ ಮಾತಾಡಿದ ಅಧ್ಯಕ್ಷರ ಭಾಷಣವನ್ನು ಈ ಕೆಳಗಿನ ಕೊಂಡಿಯಲ್ಲಿ ಕೇಳಿ.