Sunday, December 21, 2008

ನಾಡನ್ನಾಳುವವರ ರಾಜಕೀಯ ಇಚ್ಛಾಶಕ್ತಿಯ ಕೊರತೆ

ಹೈಕಮಾಂಡ್ ಸಂಸ್ಕೃತಿಯ ದಾಸರಾದ ನಮ್ಮನ್ನಾಳುವ ರಾಷ್ಟ್ರೀಯ ಪಕ್ಷಗಳಲ್ಲಿರುವವರ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಕರ್ನಾಟಕ ಕೇಂದ್ರದ ಅವಗಣನೆಗೆ ತುತ್ತಾಗಿದೆ. ನಾಡು ನುಡಿಯ ರಕ್ಷಣೆ ಮಾಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಯಾವ ಪಕ್ಷವೂ ಕನ್ನಡದ ಮಕ್ಕಳ ಕೂಗನ್ನು, ಅವರ ನ್ಯಾಯ ಸಮ್ಮತ ಬೇಡಿಕೆಯನ್ನು ಈಡೇರಿಸುವ ಬಗ್ಗೆ ತಲೆ ಕೆಡಿಸಿಕೊಳ್ಳದೇ, ದಿಲ್ಲಿ ದೊರೆಗಳ ಗುಲಾಮರಂತೆ ವರ್ತಿಸುತ್ತಿರುವುದು ಎಲ್ಲರ ಕಣ್ಣೆದುರಿನಲ್ಲಿದೆ. ಅದು ಶಾಸ್ತ್ರೀಯ ಸ್ಥಾನಮಾನವಿರಲಿ, ರೈಲ್ವೆ ಹುದ್ದೆಗಳ ನೇಮಕಾತಿಯಿರಲಿ, ಕನ್ನಡಿಗರ ಕೂಗನ್ನು ದೆಹಲಿಯ ದೊರೆಗಳಿಗೆ ತಲುಪಿಸಿ, ಭಾರತದ ಒಕ್ಕೂಟದಲ್ಲಿ ಕರ್ನಾಟಕವೆಂಬ ರಾಜ್ಯವೂ ಇದೆ, ಅಲ್ಲಿ ಕನ್ನಡಿಗರೆಂಬ ಜನಾಂಗವೂ ಇದೆ ಅನ್ನುವುದನ್ನು ಅವರ ಅರಿವಿಗೆ ಬರುವಂತೆ ಮಾಡಿದ್ದು ಕ.ರ.ವೇ ಹೋರಾಟಗಳು. ನಾಡನ್ನಾಳುವವರ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಅದರಿಂದ ನಾಡಿನ ಮೇಲಾಗುತ್ತಿರುವ ಕೆಟ್ಟ ಪರಿಣಾಮಗಳ ಬಗ್ಗೆ, ರೈಲ್ವೇ ಹೋರಾಟದ ಸಂಧರ್ಭದಲ್ಲಿ ಮಾತಾಡಿದ ಅಧ್ಯಕ್ಷರ ಭಾಷಣವನ್ನು ಈ ಕೆಳಗಿನ ಕೊಂಡಿಯಲ್ಲಿ ಕೇಳಿ