Wednesday, October 3, 2012

ಅಕ್ಟೋಬರ್ ೫ ರಂದು ಬೃಹತ್ ರಾಲಿ, ರಾಜಭವನ ಮುತ್ತಿಗೆ

ನಮ್ಮ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ಈ ಸಭೆಯಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದರ ವಿಷಯವಾಗಿ ಚರ್ಚೆ ನಡೆಯಿತು.

ಅಕ್ಟೋಬರ್ ೫, ೨೦೧೨, ಶುಕ್ರವಾರದ ದಿನ ಬೆಂಗಳೂರಿನ ನ್ಯಾಶನಲ್ ಕಾಲೇಜು ಕ್ರೀಡಾಂಗಣದಿಂದ ರಾಜಭವನದ ವರೆಗೆ ಬೃಹತ್ ಕಲ್ನಡಿಗೆ ಜಾಥವನ್ನು ಏರ್ಪಡಿಸಲಾಗುವುದು ಅಂತ ತೀರ್ಮಾನಿಸಲಾಯಿತು.