Friday, October 5, 2012

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿ ಎಂದು ಆದೇಶ ಹೊರಡಿಸಿದ ಕೇಂದ್ರ ಸರಕಾರ ಹಾಗು ಆ ಆದೇಶವನ್ನು ಪಾಲಿಸಿ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದ ರಾಜ್ಯ ಸರಕಾರದ ಕ್ರಮವನ್ನು ವಿರೋಧಿಸಿ ೦೫-೧೦-೨೦೧೨ ರಂದು ನಮ್ಮ ವೇದಿಕೆಯಿಂದ ಬೃಹತ್ ಮೆರವಣಿಗೆ

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿ ಎಂದು ಆದೇಶ ಹೊರಡಿಸಿದ ಕೇಂದ್ರ ಸರಕಾರ ಹಾಗು ಆ ಆದೇಶವನ್ನು ಪಾಲಿಸಿ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದ ರಾಜ್ಯ ಸರಕಾರದ ವಿರುದ್ಧ ೦೫-೧೦-೨೦೧೨ ರಂದು ನಮ್ಮ ವೇದಿಕೆಯು ಬೃಹತ್ ಮೆರವಣಿಗೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿತ್ತು. ಮೆರವಣಿಗೆಯಲ್ಲಿ ೨೫,೦೦೦ ಹೆಚ್ಚು ಜನ ಪಾಲ್ಗೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮೆರವಣಿಗೆಯು ನ್ಯಾಷನಲ್ ಕಾಲೇಜ್ ಮೈದಾನದಿಂದ ಶುರುವಾಗಿ, ಸಜ್ಜನ್ ರಾವ್ ವೃತ್ತ, ಜೆ.ಸಿ. ರಸ್ತೆ, ಪುರಭವನ, ಮೈಸೂರು ಬ್ಯಾಂಕ್ ವೃತ್ತ, ಸೆಂಟ್ರಲ್ ಕಾಲೇಜ್ ಮೂಲಕ ಸ್ವಾತಂತ್ರ್ಯಉದ್ಯಾನವನ ತಲುಪಿ ಅಲ್ಲಿಂದ ರಾಜಭವನದತ್ತ ಸಾಗಿತು.

ಮೆರವಣಿಗೆಯಲ್ಲಿ ಆದಿಚುಂಚನಗಿರಿ ಶ್ರೀಗಳಾದ ಬಾಲಗಂಗಾಧರ ಸ್ವಾಮಿಜಿ, ಪಂಚಮಸಾಲಿ ಮಠದ ಅಧ್ಯಕ್ಷರಾದ ಜಯಮೃತ್ಯುಂಜಯ ಸ್ವಾಮಿಜಿ, ಗೋಸಾಯಿಮಠದ ಶ್ರೀಸುರೇಶನಂದ ಸ್ವಾಮಿಜಿ, ಶ್ರೀ ನಂಜಾವಧೂತ ಸ್ವಾಮೀಜಿ, ಮಾಜಿ ಸಂಸದ ಅಂಬರೀಶ್, ಸಮತಾ ಸೈನಿಕ ದಳದ ಅಧ್ಯಕ್ಷರಾದ ಎಂ. ವೆಂಕಟಸ್ವಾಮಿ, ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ ನ ನಿಕಟಪೂರ್ವ ಅಧ್ಯಕ್ಷರಾದ ಡಾ|| ನಲ್ಲೂರು ಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಅಧ್ಯಕ್ಷರಾದ ತಿಮ್ಮೇಶ್, ಚಲನಚಿತ್ರ ವಾಣೀಜ್ಯ ಮಂಡಳಿ ಅಧ್ಯಕ್ಷರಾದ ಬಿ. ವಿಜಯಕುಮಾರ್, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಮುನಿರತ್ನ ನಾಯ್ಡು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಬಿ,ಎನ್.ವಿ. ಸುಬ್ರಹ್ಮಣ್ಯ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಟಿ.ಎ. ನಾರಾಯಣಗೌಡರು ಉಪಸ್ಥಿತರಿದ್ದರು.

ಮೆರವಣಿಗೆಯ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ -

ಕನ್ನಡ ಪ್ರಭ ವರದಿ -



ಪ್ರಜಾವಾಣಿ ವರದಿ -




ವಿಜಯ ಕರ್ನಾಟಕ ವರದಿ -

ಈಸಂಜೆ ವರದಿ -


ಸಂಜೆವಾಣಿ ವರದಿ -



ಉದಯವಾಣಿ ವರದಿ - 

ಡಿ ಎನ್ ಎ ವರದಿ -

ಡೆಕ್ಕನ್ ಹೆರಾಲ್ಡ್ ವರದಿ -