Tuesday, April 10, 2012

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಮತ್ತು ಕನ್ನಡಿಗರ ಉದ್ಯೋಗಕ್ಕಾಗಿ ನಡೆಸಿದ ಹೋರಾಟಕ್ಕೆ ಜಯ

ಬೆಂಗಳೂರು ಅಂತರಾಷ್ಹ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಮುಂಚೆಯೇ, ೨೦೦೮ ರ ಮೇ ವೇಳೆಗೇ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಡಬೇಕೆಂಬ ಮತ್ತು ಅಲ್ಲಿ ಎಲ್ಲ ರೀತಿಯಲ್ಲಿ ಕನ್ನಡಕ್ಕೆ ಆದ್ಯತೆ ಹಾಗೂ ಅಲಿನ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಸಿಂಹಪಾಲು ದೊರೆಯಬೇಕೆಂಬ ಬೇಡಿಕೆಗಳೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆಯು ತನ್ನ ಹೋರಾಟ ಆರಂಭಿಸಿತ್ತು.

ಹೋರಾಟದ ವೇಳೆ ನಾವು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮುಂದಿಟ್ಟಿದ್ದ ಕೆಲವು ಪ್ರಮುಖ ಬೇಡಿಕೆಗಳು ಹೀಗಿವೆ:

೧. ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಡಬೇಕು
೨. ವಿಮಾನ ನಿಲ್ದಾಣದಲ್ಲಿರುವ ಉದ್ಯೋಗಗಳು ಕನ್ನಡಿಗರಿಗೆ ದೊರಕಬೇಕು. ವಿಮಾನ ನಿಲ್ದಾಣಕ್ಕೆ ೪೦೦೦ ಎಕರೆ ಭೂಮಿ ನೀಡಿದ ೩೦೦೦ ರೈತ ಕುಟುಂಬದವರಿಗೆ ಆದ್ಯತೆ ನೀಡಬೇಕು.
೩. ವಿಮಾನ ನಿಲ್ದಾಣ ದಲ್ಲಿರುವ ನಾಮಫಲಕಗಳು ಮತ್ತು ಗ್ರಾಹಕ ಸೇವೆ ಕನ್ನಡದಲ್ಲಿರಬೇಕು.

೨೦೦೮ ರಲ್ಲಿ ಆರಂಭವಾದ ಈ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆಯು ನಿರಂತರವಾಗಿ ನಡೆಸಿಕೊಂಡು, ಹಲವು ಪ್ರತಿಭಟನಾ ನಡಿಗೆಗಳು, ಸರ್ಕಾರಕ್ಕೆ ಮತ್ತು ವಿಮಾನ ನಿಲ್ದಾಣದ ಮುಖ್ಯ ಅಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸುವಿಕೆ ಹಾಗೂ ಇತರೆ ಹಲವು ಹೋರಾಟಗಳನ್ನು ಮಾಡಿದ್ದರ ಫಲವಾಗಿ ಇಂದು ನಮ್ಮ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ "ನಾಡಪ್ರಭು ಕೆಂಪೇಗೌಡರ" ಹೆಸರನ್ನು ಇಡಲು ಸರ್ಕಾರ ತೀರ್ಮಾನಿಸಿದೆ. ಇದು ಕರವೇ ಹೋರಾಟಕ್ಕೆ ಮತ್ತು ಸಮಸ್ತ ಕನ್ನಡಿಗರಿಗೆ ಸಂದ ಜಯ.

ಇಷ್ಟೇ ಅಲ್ಲದೆ, ಈಗಾಗಲೆ ಭರ್ತಿಯಾಗಿರುವ ಹಲವಾರು ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ದೊರೆತಿದೆ. ಮುಂದೆಯೂ ವಿಮಾನ ನಿಲ್ದಾಣದಲ್ಲಿ ಶುರುವಾಗುವ ಇತರ ಉದ್ಯೋಗಾವಕಾಶಗಳಲ್ಲೂ ಕನ್ನಡಿಗರಿಗೆ ಆದ್ಯತೆ ದೊರಕಿಸಿಕೊಳ್ಳಲು ಹೋರಾಟಗಳನ್ನು ನಡೆಸಲಾಗುವುದು. ಜೊತೆಗೆ, ಇಡೀ ವಿಮಾನ ನಿಲ್ದಾಣದಲ್ಲಿ ಕನ್ನಡದ ವಾತಾವಾರಣ, ಕನ್ನಡದಲ್ಲಿ ದೊಡ್ಡದಾದ ನಾಮಫಲಕಗಳು ಮತ್ತು ಎಲ್ಲ ಗ್ರಾಯಕ ಸೇವೆ ಕನ್ನಡದಲ್ಲಿ ಸಿಗುವಂತಾಗಲು ಕರ್ನಾಟಕ ರಕ್ಷಣಾ ವೇದಿಕೆಯು ಹೋರಾಟ ನಡೆಸಲಿದೆ.

ಈ ವಿಚಾರವಾಗಿ ನಾವು ಇದುವರೆಗೂ ನಡೆಸಿರುವ ಕೆಲ ಮುಖ್ಯ ಹೊರಾಟಗಳ ವಿವರ ಮತ್ತು ಪತ್ರಿಕಾ ವರದಿಗಳು ಇಂತಿವೆ: