Tuesday, August 4, 2009

ತಮಿಳುನಾಡಿನಿಂದ ಮತ್ತೆ ಅನ್ಯಾಯ - ಕ.ರ.ವೇ. ಇಂದ ಖಂಡನೆ

ತಮಿಳುನಾಡಿನ ಅನ್ಯಾಯದ ಸರಣಿಗೆ ಹೊಸದೆಂಬಂತೆ ತಮಿಳುನಾಡು ಈ ಸಾರಿ ತಕರಾರು ತಗೆದಿರುವುದು ಕಾವೇರಿಯ ಉಪನದಿಗಳಾದ ಕಬಿನಿ, ಹೇಮಾವತಿ ಮತ್ತು ಸ್ವರ್ಣಾವತಿಯಲ್ಲಿ ಕರ್ನಾಟಕ ಸರಕಾರ ಕೈಗೊಂಡಿದ್ದ ನೀರಾವರಿ ಯೋಜನೆಗಳ ಬಗ್ಗೆ. ತಮಿಳುನಾಡಿನ ಪ್ರಕಾರ ಕರ್ನಾಟಕ ಕಾವೇರಿ ಮತ್ತು ಅದರ ಉಪನದಿಗಳಲ್ಲಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾದರೆ, ಕರ್ನಾಟಕ ಮೊದಲು ತಮಿಳುನಾಡಿನ ಒಪ್ಪಿಗೆಯನ್ನು ಪಡೆಯಬೇಕಂತೆ. ಇದು ತಮಿಳುನಾಡಿನ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ.

ಈ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ರಾಜ್ಯಾಧ್ಯಕ್ಷರಾದ ಶ್ರೀ ಟಿ.ಎ. ನಾರಾಯಣ ಗೌಡರು ಆ. 04 ರಂದು ನೀಡಿದ ಪತ್ರಿಕಾ ಹೇಳಿಕೆಯನ್ನು ಇಲ್ಲಿ ನೋಡಿ.