Saturday, September 14, 2013

ಭಾರತದ ಹಿಂದಿ ಪಕ್ಷಪಾತಿ ಭಾಷಾನೀತಿಯ ವಿರುದ್ಧ ಪ್ರತಿಭಟನೆ

ಹಿಂದಿ ಪಕ್ಷಪಾತಿ ಭಾಷಾನೀತಿಯ ಮೂಲಕ ಕನ್ನಡಿಗರ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರುತ್ತಿರುವ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಕಳೆದ 7 ವರ್ಷಗಳಿಂದಲೂ ಪ್ರತಿಭಟನೆ ನಡೆಸುತ್ತಾ, ಕನ್ನಡ-ಕನ್ನಡಿಗ-ಕರ್ನಾಟಕದ ರಕ್ಷಣೆ ಮತ್ತು ಉನ್ನತಿಗೆ ಕಳೆದ 13ವರ್ಷಗಳಿಂದಲೂ ಶ್ರಮಿಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯು ಈ ಬಾರಿಯೂ ಕೂಡ ರಾಜ್ಯಾದ್ಯಂತ ಹಲವೆಡೆ ಮತ್ತು ಬೆಂಗಳೂರಿನ ಕೋರಮಂಗಲದಲ್ಲಿರುವ ಕೇಂದ್ರಿಯ ಸದನದ ಕಚೇರಿ ಮುಂದೆ ಸೆಪ್ಟೆಂಬರ್ 14, 2013ರಂದು ಪ್ರತಿಭಟನೆ ನಡೆಸಿದೆವು.