Thursday, June 28, 2012

ಕ.ರ.ವೇ. ೧೧ ವರುಷ ಪೂರೈಸಿದ ಸಂದರ್ಭದಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ- ಸುದೀಪ್ ಗೆ ಪ್ರಶಸ್ತಿ ಪ್ರದಾನ

ಕ.ರ.ವೇ. ೧೧ ವರುಷ ಪೂರೈಸಿದ ಸಂದರ್ಭದಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ೨೯-೦೬-೨೦೧೨ ರಂದು ಹಮ್ಮಿಕೊಳ್ಳಲಾಗಿದೆ. ನಾಡು ನುಡಿ ಸಂಸ್ಕೃತಿ ಗಡಿ ಜಲ ರಕ್ಷಣೆಯಲ್ಲಿ ಹನ್ನೊಂದು ವರುಷಗಳ ಅವಿರತ ಚಳುವಳಿಯಲ್ಲಿ ತೊಡಗಿರುವ ಕರ್ನಾಟಕ ರಕ್ಷಣಾ ವೇದಿಕೆ ತನ್ನ ಸಾಂಸ್ಕೃತಿಕ ಘಟಕದ ಮೂಲಕ ಕನ್ನಡದ ಕಲೆ ಸಾಹಿತ್ಯ ಸಂಸ್ಕೃತಿಯ ಕ್ಷೇತ್ರದಲ್ಲೂ ನಿರಂತರ ಕ್ರಿಯಾಶೀಲ ಚಟುವಕೆಗಳನ್ನು ನಡೆಸುತ್ತಾ ಬಂದಿದೆ. ತನ್ನ ಹನ್ನೊಂದನೇ ವರ್ಷದ ಸಾಂಸ್ಕೃತಿಕ ಸಂಭ್ರಮದ ಸಂದರ್ಭದಲ್ಲಿ ಸುದೀಪ್ ಅವರಿಗೆ ಅಭಿನಯ ಚಕ್ರವರ್ತಿ ಎಂಬ ಬಿರುದನ್ನು ಇತ್ತು ಗೌರವಿಸುತ್ತಿದೆ.

ಕಾರ್ಯಕ್ರಮದ ವಿವರಗಳು ಕೆಳಕಂಡಂತೆ ಇದೆ -

ಸ್ಥಳ: ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನ
ದಿನಾಂಕ: ೨೯-೦೬-೨೦೧೨ (ಶುಕ್ರವಾರ)
ಹೊತ್ತು: ಸಂಜೆ ೫:೦೦ ಗಂಟೆ

ತಾವೆಲ್ಲರು ಬಂದು ಈ ಸಂಭ್ರಮದಲ್ಲಿ ಭಾಗಿಯಾಗಿ.