Sunday, February 20, 2011

ರಾಜ್ಯಸಭೆಗೆ ಕನ್ನಡಿಗರನ್ನೇ ಆಯ್ಕೆ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ

ನಾಡಿನ ಎಲ್ಲಾ ಪಕ್ಷಗಳು ನಾಡಿನ ಹಿತವನ್ನು ಮರೆತು ತಮ್ಮ ಸ್ವಾರ್ಥಕ್ಕಾಗಿ ಹೊರರಾಜ್ಯದವರನ್ನು ಆಯ್ಕೆ ಮಾಡಿವೆ ಮತ್ತು ಮಾಡುತ್ತಿವೆ. ರಾಜ್ಯ ಸಭೆಗೆ ಹೊರರಾಜ್ಯದವರನ್ನು ಆಯ್ಕೆ ಮಾಡುವುದನ್ನು ನಾವು ಸದಾ ಖಂಡಿಸುತ್ತಲೇ ಬಂದಿದ್ದೇವೆ.

ಈಗ ಮತ್ತೊಮ್ಮೆ ನಾಡಿನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನಾಡಿನ ಹಿತವನ್ನು ಬದಿಗೊತ್ತಿ, ಕರ್ನಾಟಕದಿಂದ ಖಾಲಿಯಿರುವ ರಾಜ್ಯಸಭೆ ಸ್ಥಾನಕ್ಕೆ ಹೇಮಾಮಾಲಿನಿಯವರನ್ನು ಆಯ್ಕೆ ಮಾಡಲು ಹೊರಟಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ, ನಾವು ಫೆಬ್ರವರಿ 20, 2011 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದೆವು.