Monday, August 23, 2010

ವೆಂಕಯ್ಯನಾಯ್ಡು ಕನ್ನಡ ವಿರೋಧಿ ಧೋರಣೆ ಖಂಡಿಸಿ ಪ್ರತಿಭಟನೆ

ವೆಂಕಯ್ಯನಾಯ್ಡು ಕರ್ನಾಟಕದಿಂದ ಸತತವಾಗಿ ೩ ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಹೀಗಿದ್ದರೂ ಅವರು ಸಂಸತ್ತಿನಲ್ಲಿ ನಾಡಿನ ಪರವಾಗಿ ಎಂದೂ ದನಿ ಎತ್ತದಿರುವುದು ಖಂಡನೀಯ. ಇದರ ಜೊತೆಗೆ ಹಿಂದಿನಿಂದಲೂ ಕನ್ನಡವನ್ನು ಕಲಿಯದೇ, ತೆಲುಗಿನಲ್ಲಿ ಭಾಷಣ ಮಾಡುವುದರ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಕೆಣುಕುತ್ತಾ ಬಂದಿದ್ದಾರೆ. ಈ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಲವಾರು ಬಾರಿ ಪ್ರತಿಭಟನೆ ನಡೆಸಿದೆ.

ವೆಂಕಯ್ಯನಾಯ್ಡು ಮೊನ್ನೆ ನಡೆದ ಬಿಜೆಪಿಯ ಬಳ್ಳಾರಿ ಸಮಾವೇಶದಲ್ಲಿಯೂ ಸಹ ತೆಲುಗಿನಲ್ಲಿ ಭಾಷಣ ಮಾಡಿ ಮತ್ತೆ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದಾರೆ, ವೆಂಕಯ್ಯನಾಯ್ಡುರವರ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸಿ ನಮ್ಮ ಕಾರ್ಯಕರ್ತರು ೨೧-೮-೨೦೧೦ ರಂದು ಪ್ರತಿಭಟನೆ ನಡೆಸಿದ್ದಾರೆ.