Thursday, March 19, 2009

ನಾಡದ್ರೋಹಿ ಎಮ್.ಇ.ಎಸ್. ಜೊತೆ ಕೈ ಜೋಡಿಸಿರುವ ಸುರೇಶ್ ಅಂಗಡಿ ಮತ್ತು ಸಂಜಯ ಪಾಟೀಲರನ್ನು ಅಮಾನತು ಗೊಳಿಸಿ - ಕ.ರ.ವೇ.

ನಾಡದ್ರೋಹಿ ಕೆಲಸಗಳನ್ನೆ ಮಾಡಿಕೊಂಡು ಬಂದಿರುವ ಎಮ್.ಇ.ಎಸ್. ಜೊತೆ ಕೈ ಜೋಡಿಸಿ, ಎಮ್.ಇ.ಎಸ್. ನ ಬಾವುಟವನ್ನು ಬೆಳಗಾವಿ ಮಹಾನಗರ ಪ್ಪಾಲಿಕೆಯ ಮೇಲೆ ಹಾರಿಸಲು ಮುಂದಾದ ಸುರೇಶ್ ಅಂಗಡಿ ಮತ್ತು ಸಂಜಯ ಪಾಟೀಲರು ಬರಿಯ ಕ್ಷಮೆ ಕೇಳಿದರೆ ಸಾಲದು, ಅವರುಗಳನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಟಿ.ಏ.ನಾರಾಯಣ ಗೌಡರು ೧೯-೦೩-೦೯ ರಂದು ಹೇಳಿದರು. ಇಲ್ಲವಾದಲ್ಲಿ, ಕರ್ನಾಟಕದಾದ್ಯಂತ ಆಂದೋಲನ ನಡೆಸಿ, ಭಾ.ಜ.ಪಾ. ವಿರುದ್ಧ ಅಸಹಕಾರ ಚಳುವಳಿಗೆ ಕ.ರ.ವೇ. ಮುಂದಾಗುವುದು ಎಂದು ಎಚ್ಚರಿಕೆ ನೀಡಿದರು.