Showing posts with label ಮಹಾರಾಷ್ಟ್ರ / Maharashtra. Show all posts
Showing posts with label ಮಹಾರಾಷ್ಟ್ರ / Maharashtra. Show all posts

Thursday, September 5, 2013

ನವೆಂಬರ್ ೧೦ ೨೦೧೩ಕ್ಕೆ ಮಹಾರಾಷ್ಟ್ರ ಕನ್ನಡಿಗರ ಸ್ವಾಭಿಮಾನ ಸಮಾವೇಶ

ನವೆಂಬರ್ ೧೦ಕ್ಕೆ ಮಹಾರಾಷ್ಟ್ರ ಕನ್ನಡಿಗರ ಸ್ವಾಭಿಮಾನ ಸಮಾವೇಶವನ್ನು ಕರ್ನಾಟಕ ರಕ್ಷಣಾ ವೇದಿಕೆ ಜತ್ತ ಪಟ್ಟಣದಲ್ಲಿ ಹಮ್ಮಿಕೊಂಡಿದೆ.

ಕನ್ನಡಪ್ರಭದಲ್ಲಿ ಹೇಳಿಕೆ

 ವಿಜಯವಾಣಿಯಲ್ಲಿ ಹೇಳಿಕೆ

Sunday, October 24, 2010

ಎಂಇಎಸ್ ಪುಂಡಾಟಿಕೆ ವಿರುದ್ಧ ಪ್ರತಿಭಟನೆ

ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿ ದ ಎಂಇಎಸ್ ಪುಂಡರನ್ನು ಬಂಧಿಸುವಂತೆ ಆಗ್ರಹಿಸಿ ರಾಜ್ಯಾಧ್ಯಂತ ಪ್ರತಿಭಟನೆ ನಡೆಸಲಾಯಿತು-

Tuesday, July 13, 2010

ಎಂಇಎಸ್ ಪುಂಡಾಟಿಕೆ ವಿರುದ್ಧ ಕರವೇ ಪ್ರತಿಭಟನೆ

ಬೆಳಗಾವಿ ಕರ್ನಾಟಕದ್ದೇ ಎಂದು ಸಾರಲು ಕರವೇ ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಈ ಹೋರಾಟಗಳ ಪರಿಣಾಮವಾಗಿ ಕೇಂದ್ರ ಸರಕಾರ ಬೆಳಗಾವಿ ಕರ್ನಾಟಕದ್ದೇ ಎಂಬ ಪ್ರಮಾಣ ಪತ್ರವನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದೆ. ನಾಡವಿರೋಧಿ ಎಂಇಎಸ್ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಹಲವಾರು ಹುನ್ನಾರಗಳನ್ನು ನಡೆಸುತ್ತಿದೆ. ಎಂಇಎಸ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದು, ಕೇಂದ್ರ ಸರಕಾರದ ಪ್ರಮಾಣ ಪತ್ರದಿಂದ ಹತಾಶೆಗೆ ಒಳಗಾಗಿದೆ. ಈ ಹತಾಶೆಯಿಂದ ೧೨-ಜೂನ್ ೨೦೧೦ ರಂದು ಬೆಳಗಾವಿಯಲ್ಲಿ ಕನ್ನಡ ದ್ವಜಕ್ಕೆ ಅವಮಾನಿಸಿ ಮಹಾರಾಷ್ಟ್ರ ಧ್ವಜವನ್ನು ಹಾರಿಸಲು ಪ್ರಯತ್ನಿಸಿ ತನ್ನ ಪುಂಡಾಟಿಕೆಯನ್ನು ಮೆರೆದಿದೆ. ಎಂಇಎಸ್ ಪುಂಡಾಟಿಕೆಯನ್ನು ವಿರೋಧಿಸಿ ಬೆಳಗಾವಿಯ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕನ್ನಡ ಧ್ವಜವನ್ನು ಹಾರಿಸಿದ್ದಾರೆ..

ಎಂಇಎಸ್ ತನ್ನ ಪುಂಡಾಟಿಕೆಯ ಮೂಲಕ ಕನ್ನಡ-ಕನ್ನಡಿಗ-ಕರ್ನಾಟಕವನ್ನು ಅವಮಾನಿಸುತ್ತಿದ್ದರು ರಾಜ್ಯ ಸರಕಾರ ಮೌನವಹಿಸಿದೆ. ಎಂಇಎಸ್ ನ ಪುಂಡಾಟಿಕೆ ಮತ್ತು ಸರಕಾರದ ಮೌನವನ್ನು ಖಂಡಿಸಿ ಕರವೇ ಕಾರ್ಯಕರ್ತರು ರಾಜ್ಯಾಧ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದರ ಬಗೆಗಿನ ಪತ್ರಿಕಾ ವರದಿಯನ್ನು ನೋಡಿ-







Wednesday, July 7, 2010

ಬೆಳಗಾವಿ ಕರ್ನಾಟಕದ್ದು ಎಂದು ಕೇಂದ್ರ ಸರಕಾರದಿಂದ ಪ್ರಮಾಣ ಪತ್ರ

ಕೇಂದ್ರ ಸರಕಾರ ಸುಪ್ರೀಂಕೋರ್ಟ್ ನಲ್ಲಿ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಪ್ರಮಾಣ ಪತ್ರ ಸಲ್ಲಿಸಿರುವುದಕ್ಕೆ ನಮ್ಮ ಕಾರ್ಯಕರ್ತರು ಸಿಹಿ ವಿತರಿಸಿ ಸಂಭ್ರಮಿಸಿದರು.
ಪತ್ರಿಕಾ ವರದಿಯನ್ನು ನೋಡಿ-

Saturday, February 6, 2010

ಎಂ. ಇ. ಎಸ್ ಗೆ ಮುಖಭಂಗ : ಕರವೇ ಹೋರಾಟ ಯಶಸ್ವಿ

ಭಾಷೆಯ ನೆಪದಲ್ಲಿ ತನ್ನ ಪುಂಡಾಟಿಕೆಯನ್ನು ಮೆರೆಸುತ್ತಾ ಬಂದಿದ್ದ ಎಂ. ಇ. ಎಸ್ ಗೆ ತೀವ್ರ ಮುಖಭಂಗವಾಗಿದೆ. ತನ್ನ ರಾಜಕೀಯ ಬೇಳೆಕಾಳನ್ನು ಬೇಯಿಸಿಕೊಳ್ಳಲು ಬೆಳಗಾವಿಯಲ್ಲಿ ಆಗಾಗ ಸಮ್ಮೇಳನದ ನೆಪದಲ್ಲಿ ಜನರ ಮಧ್ಯ ಒಡಕು ಮೂಡಿಸಲು ಪ್ರಯತ್ನಿಸುತ್ತಿದ್ದ ಎಂ. ಇ. ಎಸ್ "ಮರಾಠಿ ಸೀಮಾ ಪರಿಷತ್" ನಡೆಸಲು ಹೋಗಿ ತೀವ್ರ ಮುಖಭಂಗ ಅನುಭವಿಸಿದೆ. ನಮ್ಮ ವೇದಿಕೆಯ ದಿಟ್ಟ ಹೋರಾಟದ ಫಲವಾಗಿ "ಮರಾಠಿ ಸೀಮಾ ಪರಿಷತ್" ನೆಪ ಮಾತ್ರಕ್ಕೆ ನಡೆಸಲಾಯಿತು.

"ಮರಾಠಿ ಸೀಮಾ ಪರಿಷತ್" ಗೆ ಅವಕಾಶ ನೀಡಿದ್ದನ್ನು ವಿರೋಧಿಸಿ ೦೫-೦೨-೨೦೧೦ ರಂದು ರಾಜ್ಯಾದ್ಯಂತ ನಮ್ಮ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.









Thursday, February 4, 2010

ಮರಾಠಿ ಸಮ್ಮೇಳನ ನಿರ್ಬಂಧಕ್ಕೆ ಆಗ್ರಹಿಸಿ ಕರವೇಯಿಂದ ಬೃಹತ್ ಪ್ರತಿಭಟನೆ

ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ "ಮರಾಠಿ ಸೀಮಾ ಪರಿಷತ್" ಸಮ್ಮೇಳನಕ್ಕೆ ಅನುಮತಿ ನೀಡಬಾರದೆಂದು ನಮ್ಮ ವೇದಿಕೆ ೦೪-೦೨-೨೦೧೦ ರಂದು ಬೆಂಗಳೂರಿನ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿ ಸರಕಾರವನ್ನು ಆಗ್ರಹಿಸಿದೆ. ಬೆಳಗಾವಿಯಲ್ಲಿ ಸಾಮರಸ್ಯದಿಂದ ಬದುಕುತ್ತಿರುವ ಜನರ ಮಧ್ಯೆ ಎಂ. ಇ. ಎಸ್ ಭಾಷೆಯ ಹೆಸರಿನಲ್ಲಿ ಸಾಮರಸ್ಯ ಕದಡಲು ಪ್ರಯತ್ನಿಸುತ್ತಿದೆ, ಇದಕ್ಕೆ ಸರಕಾರ ಅವಕಾಶ ಮಾಡಿಕೊಡಬಾರದೆಂದು ನಮ್ಮ ವೇದಿಕೆ ಇಂದು ಆಗ್ರಹಿಸಿತು.





Wednesday, February 3, 2010

"ಮರಾಠಿ ಸೀಮಾ ಪರಿಷತ್" ಗೆ ವಿರೋಧ : ಕರವೇ ಮುಂದಿನ ಹೋರಾಟ

ನಾಡದ್ರೋಹಿ ಎಂ. ಇ. ಎಸ್ ನವರು ಫೆಬ್ರವರಿ ೫ರಂದು ಬೆಳಗಾವಿಯಲ್ಲಿ ನಡೆಸುವ "ಮರಾಠಿ ಸೀಮಾ ಪರಿಷತ್" ಗೆ ರಾಜ್ಯ ಸರಕಾರ ಅನುಮತಿ ನೀಡದಂತೆ ಒತ್ತಾಯಿಸಿ, ರಾಜ್ಯಾದ್ಯಂತ ಇರುವ ನಮ್ಮ ಕಾರ್ಯಕರ್ತರಿಗೆ 04-02-2010 ರಂದು ರೈಲು ಮೂಲಕ ಬೆಳಗಾವಿಗೆ ಪ್ರಯಾಣಿಸುವಂತೆ ಕರೆ ನೀಡಲಾಗಿದೆ. ನೀವು ಬನ್ನಿ ಭಾಗವಹಿಸಿ, ಹೋರಾಟವನ್ನು ಯಶಸ್ವಿಗೊಳಿಸಿ.


Tuesday, February 2, 2010

ಮರಾಠಿ ಸೀಮಾ ಪರಿಷತ್ ಮೇಳಕ್ಕೆ ಕರವೇ ವಿರೋಧ

ಬೆಳಗಾವಿ ಮಹಾರಾಷ್ಟ್ರದಲ್ಲಿದೆ ಎಂದು ಉಪರಾಷ್ಟ್ರಪತಿಗಳ ಕಾರ್ಯಾಲಯದಿಂದ ರಾಜ್ಯದ ಬೆಳಗಾವಿ ಜಿಲ್ಲೆಯ ಕ್ರೀಡಾಧಿಕಾರಿಗಳ ಕಛೇರಿಗೆ ಬಂದಿರುವ ಪತ್ರಕ್ಕೆ ಉತ್ತರಿಸದೆ ಮೌನವಹಿಸಿರುವ ರಾಜ್ಯ ಸರಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ರಾಜ್ಯಾದ್ಯಂತ ನಮ್ಮ ವೇದಿಕೆ ಇಂದು ಪ್ರತಿಭಟನೆ ನಡೆಸಿತು. ಇದರ ಜೊತೆಗೆ ಕನ್ನಡ ನಾಡಿನ ಏಕತೆಗೆ ಮಾರಕವಾಗಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯು ನಡೆಸಲು ಉದ್ದೇಶಿಸಿರುವ ಮರಾಠಿ ಸೀಮಾ ಪರಿಷತ್ ಮೇಳಕ್ಕೆ ಅವಕಾಶ ನೀಡಬಾರದೆಂದು ಆಗ್ರಹಿಸಿ ಇಂದು ಬೆಂಗಳೂರಿನಲ್ಲಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಇದರ ಪತ್ರಿಕಾ ವರದಿಯನ್ನು ನೋಡಿ.





Tuesday, October 27, 2009

ಬೆಳಗಾವಿಯಲ್ಲಿ ಎಂ.ಇ.ಎಸ್. ನಿಂದ ಕರ್ನಾಟಕ ವಿರೋಧಿ ನಿರ್ಣಯಗಳು - ಕ.ರ.ವೇ. ಇಂದ ಖಂಡನೆ

ಬೆಳಗಾವಿಯಲ್ಲಿ ಮಹಾಮೇಳಾವ ನಡೆಸಲು ಸರ್ಕಾರ ನೀಡಿದ್ದ ಷರತ್ತುಬದ್ಧ ಅನುಮತಿಯನ್ನು ತಿರಸ್ಕರಿಸಿ, ಕರ್ನಾಟಕದ ವಿರುದ್ಧ; ಕರ್ನಾಟಕ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ ನಡೆಸಬಾರದು,ಬೆಳಾಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು, ಬೆಳಗಾವಿಯನ್ನು ಬೆಳಗಾಂ ಎಂದು ಕರೆಯಬೇಕು, ಬೆಳಗಾವಿಯಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸಬಾರದು ಇದೇ ಮೊದಲಾದ ನಿರ್ಣಯಗಳನ್ನು ಎಂ.ಇ.ಎಸ್. ಮಹಾಮೇಳಾವದಲ್ಲಿ ಕೈಗೊಂಡಿದೆ.

ಕಾರ್ಯಕ್ರಮಕ್ಕೆ ಅನುಮತಿ ನೀಡುವಾಗ ಹಾಕಿದ್ದ ಷರತ್ತುಗಳನ್ನು ಗಾಳಿಗೆ ತೂರಿ ಕರ್ನಾಟಕದ ವಿರುದ್ಧವೇ ನಿರ್ಣಯಗಳನ್ನು ತೆಗೆದು ಕೊಂಡಿರುವ ಎಂ.ಇ.ಎಸ್. ನ ಧೋರಣೆಯನ್ನು ನಮ್ಮ ವೇದಿಕೆ ತೀವ್ರವಾಗಿ ಖಂಡಿಸುತ್ತದೆ.

ಇದರ ವರದಿಯನ್ನು ಇಲ್ಲಿ ನೋಡಿ.


Sunday, October 25, 2009

ಬೆಳಗಾವಿಯಲ್ಲಿ ಮಹಾಮೇಳಾವಕ್ಕೆ ಎಂ.ಇ.ಎಸ್. ನಿಂದ ಸಿದ್ದತೆ - ಕ.ರ.ವೇ. ಇಂದ ಪ್ರತಿಭಟನೆ

ಬೆಳಗಾವಿಯಲ್ಲಿ ಎಂ.ಇ.ಎಸ್. ತನ್ನ ಎಂದಿನ ಕ್ಯಾತೆ ಮತ್ತೆ ತೆಗೆದಿದೆ, ಮಹಾಮೇಳಾವ ನಡೆಸಿ ಸೌಹಾರ್ದತೆಯಿಂದ ಬಾಳ್ವೆ ನಡೆಸುತ್ತಿರುವ ಕನ್ನಡಿಗರು ಮತ್ತು ಮರಾಠಿಗರ ನಡುವೆ ಕಲಹದ ಬೀಜ ಬಿತ್ತಲು ಪ್ರಯತ್ನಿಸುತ್ತಿದೆ.

ಬೆಳಗಾವಿಯಲ್ಲಿ ಮಹಾಮೇಳಾವ ನಡೆಸಲು ಮುಂದಾಗಿರುವ ಎಂ.ಇ.ಎಸ್. ಕ್ರಮವನ್ನು ಖಂಡಿಸಿ ನಮ್ಮ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಂತರ ಬೆಂಗಳೂರಿನಲ್ಲಿ ನಮ್ಮ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರು ಮಹಾಮೇಳಾವಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಪತ್ರ ನೀಡಿದರು.

ಇದರ ವರದಿಯನ್ನು ಇಲ್ಲಿ ನೋಡಿ.


Monday, March 30, 2009

ಬೆಳಗಾವಿ ಮಹಾಪೌರರಾಗಿ ಕನ್ನಡಿಗರ ಆಯ್ಕೆ - ಕ.ರ.ವೇ. ಹೋರಾಟಕ್ಕ ಸಿಕ್ಕ ಫಲ

ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ನಡೆಸಿದ ಹೋರಾಟ ಮತ್ತು ಕಾರ್ಯಕ್ರಮಗಳ ಫಲವಾಗಿ ಮತ್ತೆ ಬೆಳಗಾವಿಯ ಮಹಾನಗರ ಪಾಲಿಕೆಯ ಮಹಾಪೌರರಾಗಿ ಕನ್ನಡಿಗರೇ ಆಯ್ಕೆಯಾಗಿದ್ದಾರೆ. ಇದು ಕರ್ನಾಟಕ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದಂತಾಗಿದೆ.






BELGAUM: Once again Kannada faction sailed through in the mayoral elections at Belgaum City Corporation on Monday with Yallappa Kurubar becoming the mayor and Jyoti Bhavikatti, his deputy.

Kurubar from Sarva Bhashika Sama Vichar Vedike (SBSVV) polled 34 of the total 62 votes, including those of four MLAs and an MP, whereas Maharashtra Ekikaran Samiti (MES) candidate Dhanaraj Gavali secured only 26 votes. MLAs Satish Jarkiholi, Firoz Sait, Abhay Patil, Sanjay Patil and MP Suresh Angadi voted in favour of the Kannada faction. Jyoti managed to
secure 34 votes against MES contestant Aruna Kutre, who got only 27 votes.

Six councilors had filed nominations for the mayor's post. However, Shanta Uppar, Kalpana Palekar and Gourish Kammar withdrew their papers, leaving Kurubar and Gavali and Shubhangi Chitragar (MES) in the fray. In spite of being a candidate, Chitragar supported Gavali. Of the six nominations filed for deputy mayor's post, the one by Babajan Matawal got rejected for technical reasons. Anita Kitwadkar, Renu Killekar and Vandana Bilagi withdrew their nominations. Councilor Sabhaji Chouhan stood neutral while Jayashree Pise did not vote in the election. Speaking to reporters, mayor-elect Kurubar said he will work for the development of the city by taking into confidence the members of ruling and opposition members and local politicians. He also thanked those who voted in his favour. Earlier, Gavali objected to voting by MP Suresh Angadi as "the Election Commission had enforced election code of conduct in the wake of Lok Sabha elections". However, BCC law officer defended Angadi's voting, saying the Parliament has not been dissolved and Angadi is still an MP with voting powers. Incumbent mayor Prashanta Budavi held the elections as the presiding officer.

KRV celebrates Karnataka Rakshana Vedike (KRV) celebrated the election of a Kannadiga as the mayor of BCC. Speaking to reporters, KRV president Narayanagowda said their struggle to have a Kannadaiga mayor has paid off. District in-charge minister Basavaraj Bommai too expressed happiness and said the government will take more development works in the city. TNN

Thursday, March 19, 2009

ನಾಡದ್ರೋಹಿ ಎಮ್.ಇ.ಎಸ್. ಜೊತೆ ಕೈ ಜೋಡಿಸಿರುವ ಬಿ.ಜೆ.ಪಿ. ಗೆ ತಕ್ಕ ಪಾಠ ಕಲಿಸಿ - ಟಿ.ಏ. ನಾರಾಯಣ ಗೌಡ

ಎಮ್.ಇ.ಎಸ್. ಜೊತೆ ಕೈ ಜೋಡಿಸಿ ಬೆಳಗಾವಿ ಮಹಾ ನಗರ ಪಾಲಿಕೆ ಕಟ್ಟಡದ ಮೇಲೆ ಎಮ್.ಇ.ಎಸ್. ನ ಬಾವುಟ ಹಾರಿಸಲು ಮುಂದಾದ ಬಿ.ಜೆ.ಪಿ. ಕ್ಕೆ, ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಟಿ.ಏ. ನಾರಾಯಣ ಗೌಡರು ದೇವಮಾಚೋಹಳ್ಳಿಯಲ್ಲಿ ಕ.ರ.ವೇ. ಮಹಿಳಾ ಘಟಕವನ್ನು ಉದ್ಘಾಟಿಸುತ್ತ ಹೇಳಿದರು.

ಅದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ.


Tuesday, March 17, 2009

ಬೆಳಗಾವಿ ಪಾಲಿಕೆ ಮೇಲೆ ಎಮ್.ಇ.ಎಸ್. ನ ಬಾವುಟ ಹಾರಿಸಲು ಮುಂದಾದ ಸಂಸದ ಸುರೇಶ್ ಅಂಗಡಿ - ಕ.ರ.ವೇ. ಇಂದ ಪ್ರತಿಭಟನೆ

ಬೆಳಗಾವಿ ಪಾಲಿಕೆ ಮೇಲೆ ಎಮ್.ಇ.ಎಸ್. ನ ಬಾವುಟ ಹಾರಿಸಲು ಮುಂದಾದ ಸಂಸದ ಸುರೇಶ್ ಅಂಗಡಿ ಮತ್ತು ಶಾಸಕ ಸಂಜಯ ಪಾಟೀಲ ರ ವಿರುದ್ಧ, ಮಾರ್ಚ್ ೧೭ ರಂದು ನಮ್ಮ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಅದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ.








Friday, February 27, 2009

ಬೆಳಗಾವಿಯಲ್ಲಿ ಕನ್ನಡಿಗರೇ ಮಹಾಪೌರರಾಗಲಿ - ಟಿ.ಏ.ನಾರಾಯಣ ಗೌಡ

ಬೆಳಗಾವಿ ನಗರ ಪಾಲಿಕೆಗೆ ಕನ್ನಡಿಗರೇ ಮಹಾಪೌರರಾಗಬೇಕು ಮತ್ತು ಇದನ್ನು ತಡೆಯಲೆತ್ನಿಸಿದವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಬೆಳಗಾವಿಯಲ್ಲಿ ಸುದ್ದಿಗಾರರಿಗೆ ಟಿ.ಏ. ನಾರಾಯಣ ಗೌಡರು ಹೇಳಿದರು.

ಅದರ ಪತ್ರಿಕಾ ವರದಿಗಳು ಇಲ್ಲಿವೆ.





Monday, October 6, 2008

ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆಗಾಗಿ ಬೆಳಗಾವಿಯಲ್ಲಿ ಪ್ರತಿಭಟನೆ.

ನಾಮಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.












Thursday, March 20, 2008

ಕನ್ನಡಿಗರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ವಿರುದ್ದ ಪ್ರತಿಭಟನೆ



ಕನ್ನಡಿಗರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಆರ್.ಆರ್. ಪಾಟೀಲ್ ವಿರುದ್ದ ಪ್ರತಿಭಟನೆ ನಡೆಸಲಾಯಿತು

Monday, March 10, 2008

ಬೆಳಗಾವಿಯ ಪಾಲಿಕೆಯ ಮೇಲೆ ಕನ್ನಡದ ಬಾವುಟವನ್ನು ಹಾರಿಸಿದವರಿಗೆ ಅಭಿನಂದನೆ


ಬೆಳಗಾವಿಯ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಪಾಲಿಕೆಯ ಮೇಲೆ ಕನ್ನಡದ ಬಾವುಟವನ್ನು ಹಾರಿಸಿದ ಮಹಾಪೌರ ಮತ್ತು ಉಪ ಮಹಾ ಪೌರರಿಗೆ ಬೆಂಗಳೂರಿನಲ್ಲಿ ಅಭಿನಂದನೆ ಸಲ್ಲಿಸಲಾಯಿತು