Tuesday, October 27, 2009

ಬೆಳಗಾವಿಯಲ್ಲಿ ಎಂ.ಇ.ಎಸ್. ನಿಂದ ಕರ್ನಾಟಕ ವಿರೋಧಿ ನಿರ್ಣಯಗಳು - ಕ.ರ.ವೇ. ಇಂದ ಖಂಡನೆ

ಬೆಳಗಾವಿಯಲ್ಲಿ ಮಹಾಮೇಳಾವ ನಡೆಸಲು ಸರ್ಕಾರ ನೀಡಿದ್ದ ಷರತ್ತುಬದ್ಧ ಅನುಮತಿಯನ್ನು ತಿರಸ್ಕರಿಸಿ, ಕರ್ನಾಟಕದ ವಿರುದ್ಧ; ಕರ್ನಾಟಕ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ ನಡೆಸಬಾರದು,ಬೆಳಾಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು, ಬೆಳಗಾವಿಯನ್ನು ಬೆಳಗಾಂ ಎಂದು ಕರೆಯಬೇಕು, ಬೆಳಗಾವಿಯಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸಬಾರದು ಇದೇ ಮೊದಲಾದ ನಿರ್ಣಯಗಳನ್ನು ಎಂ.ಇ.ಎಸ್. ಮಹಾಮೇಳಾವದಲ್ಲಿ ಕೈಗೊಂಡಿದೆ.

ಕಾರ್ಯಕ್ರಮಕ್ಕೆ ಅನುಮತಿ ನೀಡುವಾಗ ಹಾಕಿದ್ದ ಷರತ್ತುಗಳನ್ನು ಗಾಳಿಗೆ ತೂರಿ ಕರ್ನಾಟಕದ ವಿರುದ್ಧವೇ ನಿರ್ಣಯಗಳನ್ನು ತೆಗೆದು ಕೊಂಡಿರುವ ಎಂ.ಇ.ಎಸ್. ನ ಧೋರಣೆಯನ್ನು ನಮ್ಮ ವೇದಿಕೆ ತೀವ್ರವಾಗಿ ಖಂಡಿಸುತ್ತದೆ.

ಇದರ ವರದಿಯನ್ನು ಇಲ್ಲಿ ನೋಡಿ.