Monday, September 28, 2009

ಮೈಸೂರಿನ ರಂಗಾಯಣದಲ್ಲಿ ತಿರುವಳ್ಳುವರ್ ಪ್ರತಿಮೆ - ಕ.ರ.ವೇ. ಇಂದ ವಿರೋಧ

ಮೈಸೂರಿನ ರಂಗಾಯಣದಲ್ಲಿ ತಿರುವಳ್ಳುವರ್ ಪ್ರತಿಮೆ ಪ್ರತ್ಯಕ್ಷವಾಗಿದ್ದರ ಸುದ್ದಿ ತಿಳಿದ ನಮ್ಮ ಕಾರ್ಯಕರ್ತರು, ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.

ಇದರ ವರದಿಯನ್ನಿ ಇಲ್ಲಿ ನೋಡಿ.


Thursday, September 24, 2009

ಕರ್ನಾಟಕದಲ್ಲಿನ ರಾಜಕೀಯ ಪಕ್ಷಗಳಿಗೆ ಕನ್ನಡ ಕಾಳಜಿ ಇಲ್ಲ - ಕ.ರ.ವೇ.

ಕರ್ನಾಟಕದ ಯಾವುದೇ ಪಕ್ಷಕ್ಕು ಕನ್ನಡದ ಬಗ್ಗೆ ಕಾಳಜಿ ಇಲ್ಲ ಎಂದು ಟಿ.ಏ. ನಾರಾಯಣ ಗೌಡರು ಹೇಳಿದರು.

ಇದರ ವರದಿಯನ್ನು ಇಲ್ಲಿ ನೋಡಿ

Monday, September 21, 2009

ಕನ್ನಡ ನಾಡು-ನುಡಿ ಯನ್ನು ಬಿಂಬಿಸುವಂತಹ ಕೃತಿಗಳನ್ನು ಪ್ರಕಟಿಸಲು ನಿರ್ಧಾರ - ಕ.ರ.ವೇ.

ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿದ ಧೀಮಂತ ಕನ್ನಡಿಗರು, ಗಡಿ ಭಾಗದಲ್ಲಿ ಕನ್ನಡ ನುಡಿ ಅಭಿವೃದ್ಧಿಗೆ ಶ್ರಮಿಸಿದವರು, ಜಿಲ್ಲೆಗಳ ಐತಿಹಾಸಿಕ ಪರಂಪರೆ, ನೆಲ-ಜಲ ವಿವಾದಗಳು, ಈ ವಿವಾದಗಳಿಂದ ಕನ್ನಡ ನಾಡಿಗೆ ಆಗಿರುವ ಅನ್ಯಾಯ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನಗಳು, ಖರ್ಚು-ವೆಚ್ಚ, ಕರುನಾಡಿಗಾಗಿ ಸದಾ ತುಡಿಯುತ್ತಿದ್ದ ರಾಜರು, ರಾಜ ಮನೆತನಗಳು ಸೇರಿದಂತೆ ಮತ್ತಿತರೆ ಅಂಶಗಳನ್ನು ಒಳಗೊಂಡ ಕೃತಿಗಳನ್ನು; ಆರ್ಥಿಕವಾಗಿ ದುರ್ಬಲರಾಗಿರುವ ಸಾಹಿತಿಗಳು ಪ್ರಕಟಿಸಲು ಇಚ್ಚಿಸಿದ್ದಲ್ಲಿ, ನಮ್ಮ ವೇದಿಕೆ ಅವನ್ನು ಪ್ರಕಟಿಸಲು ಮುಂದಾಗಲಿದೆ.

ಇದರ ವರದಿಯನ್ನು ಇಲ್ಲಿ ನೋಡಿ.

"ಸಿಂಹ ಘರ್ಜನೆ" - ಟಿ.ಏ. ನಾರಾಯಣ ಗೌಡರ ಬದುಕು, ಹೋರಾಟದ ಹಾದಿಯ ಬಗ್ಗೆ ಬರೆದಿರುವ ಹೊತ್ತಿಗೆ ಬಿಡುಗಡೆ











"ಸಿಂಹ ಘರ್ಜನೆ" - ಟಿ.ಏ. ನಾರಾಯಣ ಗೌಡರ ಬದುಕು, ಹೋರಾಟದ ಹಾದಿಯ ಬಗ್ಗೆ ಬರೆದಿರುವ ಹೊತ್ತಿಗೆ ಬಿಡುಗಡೆ ಸಮಾರಂಭ ಆ. ೧ ನೇ ತಾರೀಕಿನಂದು ರವೀಂದ್ರ ಕಲಾಕ್ಷೇತ್ರದಲ್ಲಿ ನೆರೆವೇರಿತು.

ಇದರ ವರದಿಯನ್ನು ಇಲ್ಲಿ ನೋಡಿ.

Wednesday, September 16, 2009

ಹಿಂದಿ ಸಪ್ತಾಹ ರದ್ದು ಪಡಿಸಲು ಕ.ರ.ವೇ. ಆಗ್ರಹ

ಕೇಂದ್ರ ಸರಕಾರ, ಕೇಂದ್ರ ಸರಕಾರದ ಕಚೇರಿಗಳಲ್ಲಿ "ಹಿಂದಿ ಸಪ್ತಾಹ" ಕಾರ್ಯಕ್ರಮವನ್ನು ನಡೆಸಿ ಕನ್ನಡಿಗರ ಮೇಲೆ ಹಿಂದಿಯನ್ನು ಹೇರುವ ಮೂಲಕ, ಕನ್ನಡವನ್ನು ಮುಗಿಸುವ ಹುನ್ನಾರ ನಡೆಸುತ್ತಿದೆ. "ಹಿಂದಿ ಸಪ್ತಾಹ" ಕಾರ್ಯಕ್ರಮವನ್ನು ರದ್ದುಪಡಿಸಿಲು ನಾಡಿನ ಜನತೆ ಹಾಗು ಎಲ್ಲ ರಾಜಕೀಯ ಪಕ್ಷಗಳು ಸಂಘಟಿತ ಹೋರಾಟ ನಡೆಸಬೇಕಾಗಿ ಟಿ.ಎ. ನಾರಾಯಣ ಗೌಡರು ಪತ್ರಿಕಾ ಹೇಳಿಕೆ ನೀಡಿದರು.

ಇದರ ವರದಿಯನ್ನು ಇಲ್ಲಿ ನೋಡಿ.





Thursday, September 10, 2009

ಈಗ ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಕ.ರ.ವೇ.

ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎನ್ನುವ ಘೋಷವಾಕ್ಯದೊಂದಿಗೆ ೧೯೯೯ರಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಕ್ಷಣಾ ವೇದಿಕೆ ಇಂದು ನಾಡಿನ ಅತಿದೊಡ್ಡ ಬಲಿಷ್ಠ ಕನ್ನಡಪರ ಸಂಘಟನೆಯಾಗಿ, ಹೆಮ್ಮರವಾಗಿ ಬೆಳೆದು ನಿಂತಿದೆ. ಇಂದಿನ ಸಂಪರ್ಕ ಯುಗದಲ್ಲಿ ಅಂತರ್ಜಾಲದಲ್ಲಿ ಕನ್ನಡಿಗರಿಗೆ ನಮ್ಮ ಹೋರಾಟಗಳು ಮತ್ತು ಕಾರ್ಯಕ್ರಮಗಳ ಬಗ್ಗೆ, ನಮ್ಮ ಬ್ಲಾಗ್ ಮತ್ತು ಅಂತರ್ಜಾಲ ತಾಣದಲ್ಲಿ ಮಾಹಿತಿಯನ್ನು ಕೊಡುತ್ತಾ ಬಂದಿದ್ದೇವೆ. ಇದರ ಜೊತೆಗೆ ಬಹು ಬಳಕೆಯಲ್ಲಿರುವ ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಕರವೇ ತನ್ನ ಖಾತೆಯನ್ನು ಆರಂಭಿಸಿದೆ ಎಂದು ತಿಳಿಸಲು ಸಂತೋಷ ಪಡುತ್ತೇವೆ. ಅಲ್ಲಿಯೂ ಕೂಡ ನೀವು ನಮ್ಮೊಡನೆ ಸಂಪರ್ಕದಲ್ಲಿ ಇರಬೇಕೆಂದು ಕೋರುತ್ತೇವೆ.

ಟ್ವಿಟ್ಟರ್ ನಲ್ಲಿ ನಮ್ಮನ್ನು ಹಿಂಬಾಲಿಸಲು

http://twitter.com/karave_krv

ಫೇಸ್ ಬುಕ್ ಕರವೇ ಅಧಿಕೃತ ಗುಂಪು

http://www.facebook.com/search/?q=karnataka+rakshana+vedike&init=quick#/group.php?gid=162471231000&ref=search&sid=1086522947.2865514005..1