Tuesday, December 23, 2008

ಎಚ್.ಎನ್. ನಂಜೇಗೌಡ - ಒಂದು ನೆನಪು


Sunday, December 21, 2008

ನಾಡನ್ನಾಳುವವರ ರಾಜಕೀಯ ಇಚ್ಛಾಶಕ್ತಿಯ ಕೊರತೆ

ಹೈಕಮಾಂಡ್ ಸಂಸ್ಕೃತಿಯ ದಾಸರಾದ ನಮ್ಮನ್ನಾಳುವ ರಾಷ್ಟ್ರೀಯ ಪಕ್ಷಗಳಲ್ಲಿರುವವರ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಕರ್ನಾಟಕ ಕೇಂದ್ರದ ಅವಗಣನೆಗೆ ತುತ್ತಾಗಿದೆ. ನಾಡು ನುಡಿಯ ರಕ್ಷಣೆ ಮಾಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಯಾವ ಪಕ್ಷವೂ ಕನ್ನಡದ ಮಕ್ಕಳ ಕೂಗನ್ನು, ಅವರ ನ್ಯಾಯ ಸಮ್ಮತ ಬೇಡಿಕೆಯನ್ನು ಈಡೇರಿಸುವ ಬಗ್ಗೆ ತಲೆ ಕೆಡಿಸಿಕೊಳ್ಳದೇ, ದಿಲ್ಲಿ ದೊರೆಗಳ ಗುಲಾಮರಂತೆ ವರ್ತಿಸುತ್ತಿರುವುದು ಎಲ್ಲರ ಕಣ್ಣೆದುರಿನಲ್ಲಿದೆ. ಅದು ಶಾಸ್ತ್ರೀಯ ಸ್ಥಾನಮಾನವಿರಲಿ, ರೈಲ್ವೆ ಹುದ್ದೆಗಳ ನೇಮಕಾತಿಯಿರಲಿ, ಕನ್ನಡಿಗರ ಕೂಗನ್ನು ದೆಹಲಿಯ ದೊರೆಗಳಿಗೆ ತಲುಪಿಸಿ, ಭಾರತದ ಒಕ್ಕೂಟದಲ್ಲಿ ಕರ್ನಾಟಕವೆಂಬ ರಾಜ್ಯವೂ ಇದೆ, ಅಲ್ಲಿ ಕನ್ನಡಿಗರೆಂಬ ಜನಾಂಗವೂ ಇದೆ ಅನ್ನುವುದನ್ನು ಅವರ ಅರಿವಿಗೆ ಬರುವಂತೆ ಮಾಡಿದ್ದು ಕ.ರ.ವೇ ಹೋರಾಟಗಳು. ನಾಡನ್ನಾಳುವವರ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಅದರಿಂದ ನಾಡಿನ ಮೇಲಾಗುತ್ತಿರುವ ಕೆಟ್ಟ ಪರಿಣಾಮಗಳ ಬಗ್ಗೆ, ರೈಲ್ವೇ ಹೋರಾಟದ ಸಂಧರ್ಭದಲ್ಲಿ ಮಾತಾಡಿದ ಅಧ್ಯಕ್ಷರ ಭಾಷಣವನ್ನು ಈ ಕೆಳಗಿನ ಕೊಂಡಿಯಲ್ಲಿ ಕೇಳಿ

ರೈಲ್ವೆ ಹುದ್ದೆಗಳ ನೇಮಕಾತಿ - ಸರಿಯಾದ ವ್ಯವಸ್ಥೆ ಹೇಗಿರಬೇಕು?

ರೈಲ್ವೆ ಮಂತ್ರಿ ಲಾಲೂ ಪ್ರಸಾದ ಯಾದವ್, ರೈಲ್ವೆ ಇಲಾಖೆಯನ್ನು ತನ್ನ ಖಾಸಗಿ ಆಸ್ತಿ ಎನ್ನುವಂತೆ ಬಳಸಿ, ನ್ಯಾಯಸಮ್ಮತವಾಗಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಸಿಗಬೇಕಾದ ರೈಲ್ವೆ ಹುದ್ದೆಗಳನ್ನು ಬಿಹಾರಿಗಳ ಪಾಲಾಗಿಸುವ ಸಂಚನ್ನು ಮಾಡಿದಾಗ, ಅದರ ವಿರುದ್ಧ ರಾಜ್ಯವ್ಯಾಪಿ ಜನಾಂದೋಲನ ರೂಪಿಸಿ, ಅದನ್ನು ನಿಲ್ಲಿಸಿದ್ದು ಕ.ರ.ವೇ ಹೋರಾಟ. ಭಾರತದ ಎಲ್ಲ ರಾಜ್ಯದಲ್ಲೂ, ಎಲ್ಲ ರೈಲ್ವೆ ವಲಯದಲ್ಲೂ ಒಂದೇ ದಿನ ನೇಮಕಾತಿ ನಡೆಸಬೇಕು, ಆ ಮೂಲಕ ಪ್ರತಿ ರಾಜ್ಯದ ರೈಲ್ವೆ ವಲಯದಲ್ಲೂ, ಆಯಾ ರಾಜ್ಯದ ಜನರಿಗೆ ಉದ್ಯೋಗದಲ್ಲಿ ಸಮಾನ ಅವಕಾಶ ಸಿಗುತ್ತೆ ಎಂದು ಸರಿಯಾದ ಒಕ್ಕೂಟ ವ್ಯವಸ್ಥೆಯಲ್ಲಿ ಉದ್ಯೋಗವಕಾಶದ ಹಂಚಿಕೆ ಹೇಗಿರಬೇಕು ಎನ್ನುವ ಬಗ್ಗೆ, ರೈಲ್ವೇ ಹೋರಾಟದ ಸಂಧರ್ಭದಲ್ಲಿ ಮಾತಾಡಿದ ಅಧ್ಯಕ್ಷರ ಭಾಷಣವನ್ನು ಈ ಕೆಳಗಿನ ಕೊಂಡಿಯಲ್ಲಿ ಕೇಳಿ.


ಕರ್ನಾಟಕದಲ್ಲಿ ಕನ್ನಡಿಗನಾಗಿರು

ಕನ್ನಡಿಗರು ಸಜ್ಜನರು, ವಿಶಾಲ ಹೃದಯಿಗಳು. ಕುವೆಂಪು ಅವರ ನುಡಿಯಂತೆ ಕರು ನಾಡು " ಸರ್ವ ಜನಾಂಗದ ಶಾಂತಿಯ ತೋಟ" ವಾಗಿದೆ. ಎಲ್ಲ ಜನಾಂಗದ, ಎಲ್ಲ ಧರ್ಮದ ಸಹಬಾಳ್ವೆಗೆ, ಬದುಕು ಕಟ್ಟಿಕೊಳ್ಳೊಕೆ ಇದು ಯಾವತ್ತು ಅವಕಾಶ ಮಾಡಿ ಕೊಟ್ಟಿದೆ. ಆದ್ರೆ ಇಲ್ಲಿ ನೆಮ್ಮದಿ, ಬದುಕು ಅರಸಿ ಬರುವ ಜನರು, ಕನ್ನಡದ ನೆಲದಲ್ಲಿ, ಕನ್ನಡ ಕಲಿತು, ಕನ್ನಡಿಗರೊಡನೆ ಬೆರೆತು, ಕನ್ನಡಿಗರಾಗಿ ಬದುಕಿ ಎಂದು ಕರೆ ಕೊಟ್ಟ ಅಧ್ಯಕ್ಷರ ಭಾಷಣವನ್ನು ಈ ಕೆಳಗಿನ ಕೊಂಡಿಯಲ್ಲಿ ಕೇಳಿ.


Friday, December 19, 2008

ನಂಜೇಗೌಡರು ಮತ್ತೆ ಕನ್ನಡ ನಾಡಿನಲ್ಲಿ ಹುಟ್ಟಿಬರಲಿ




ನೀರಾವರಿ ತಜ್ಞ ಎಚ್.ಎನ್ ನಂಜೇಗೌಡರ ನಿಧನದಿಂದ ಕನ್ನಡ ನಾಡಿಗೆ ಬರಿಸಲಾಗದ ನಷ್ಟವಾಗಿದೆ. ಅವರು ಮತ್ತೆ ನಮ್ಮ ನಾಡಿನಲ್ಲಿ ಹುಟ್ಟಿಬರಲೆಂದು ಕರ್ನಾಟಕ ರಕ್ಷಣಾ ವೇದಿಕೆ ಬಯಸುತ್ತದೆ.



Tuesday, December 16, 2008

ಎಸ್.ಬಿ.ಐ. ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕನ್ನಡೇತರರ ಆಯ್ಕೆ ಯ ವಿರುದ್ಧ ಪ್ರತಿಭಟನೆ

ಭಾರತೀಯ ಸ್ಟೇಟ್ ಬ್ಯಾಂಕ್ ನ ಕರ್ನಾಟಕ ವಲಯದಲ್ಲಿ ಲಭ್ಯವಿರುವ ಹಾಗೂ ನ್ಯಾಯಯುತವಾಗಿ ಕನ್ನಡಿಗ ಅಭ್ಯರ್ಥಿಗಳಿಗೆ ದೊರಕಬೇಕಾಗಿದ್ದ ಹುದ್ದೆಗಳು ಪರರಾಜ್ಯದವರ ಪಾಲಾಗಿ, ಕನ್ನಡಿಗ ಸಮುದಾಯಕ್ಕಾಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಬ್ಯಾಂಕ್ ಅಧಿಕಾರಿಗಳಿಗೆ ಕೊಟ್ಟ ಹಕ್ಕೊತ್ತಾಯ ಪತ್ರ-



ಪತ್ರಿಕಾ ವರದಿ







ದೃಶ್ಯ ಚಿತ್ರಗಳು

Wednesday, December 10, 2008

ಉಚ್ಚ ನ್ಯಾಯಾಲಯದಲ್ಲಿ ಸಂದ ಜಯ

ಕರ್ನಾಟಕ ರಕ್ಷಣಾ ವೇದಿಕೆಯು ನಾಡಿನ ಅತಿ ದೊಡ್ಡ ಸಾಮಾಜಿಕ ಸಂಘಟನೆಯಾಗಿದ್ದು ಹತ್ತಾರು ಲಕ್ಷ ಸದಸ್ಯರನ್ನು ಹೊಂದಿದೆ. ತನ್ನ ಕನ್ನಡ ಪರ ಕಾಳಜಿಯಿಂದ ನಾಡಿನ ಜನತೆಯ ಮೆಚ್ಚಿನ ಸಂಘಟನೆಯಾಗುವುದರ ಜೊತೆಯಲ್ಲೇ ಕನ್ನಡಿಗರ ನಾಳೆಗಳ ಆಶಾಕಿರಣವಾಗಿದೆ. ಸಂಘಟನೆಯ ಬೆಳವಣಿಗೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸುವ ಉದ್ದೇಶದಿಂದ ಕೆಲವ್ಯಕ್ತಿಗಳು ಸಂಘಟನೆಯ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದರು. ತಮ್ಮ ಕೆಟ್ಟ ನಡವಳಿಕೆಯಿಂದಾಗಿ ಸಂಘಟನೆಯಿಂದ ಹೊರಹಾಕಲ್ಪಟ್ಟಿದ್ದರೂ ಅನಧಿಕೃತವಾಗಿ ತಮ್ಮಗಳನ್ನೇ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳೆಂದು ಬಿಂಬಿಸಿಕೊಳ್ಳುತ್ತಿದ್ದರು.

ಹೀಗೆ ಕರ್ನಾಟಕ ರಕ್ಷಣಾ ವೇದಿಕೆಯ ಹೆಸರನ್ನು ದುರುಪಯೋಗಿಸಿಕೊಳ್ಳುವುದನ್ನು ತಡೆಯಲು ದಿನಾಂಕ ೧೮.೦೯.೨೦೦೬ರಂದು ಶ್ರೀ ನಾರಾಯಣಗೌಡರ ನೇತೃತ್ವವನ್ನು ಮಾನ್ಯ ಮಾಡುವ ಆದೇಶವನ್ನು ಹೊರಡಿಸುವ ಮೂಲಕ ಜಿಲ್ಲಾ ನೋಂದಣಾಧಿಕಾರಿಗಳು, ಸಂಘ ಮತ್ತು ಸಂಸ್ಥೆ, ಬೆಂಗಳೂರು ಇವರು ಕ್ರಮ ಕೈಗೊಂಡಿದ್ದರು.

ಜಿಲ್ಲಾ ನೋಂದಣಾಧಿಕಾರಿಗಳ ಈ ಆದೇಶವನ್ನು ರಾಜ್ಯ ಹೈಕೋರ್ಟಿನಲ್ಲಿ ಶಿವರಾಮೇಗೌಡ ಮತ್ತಿತರರು ಪ್ರಶ್ನಿಸಿದ್ದರು. ಸಂಘಟನೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ನಂತರ ಮಾನ್ಯ ರಾಜ್ಯ ಉಚ್ಚನ್ಯಾಯಾಲಯ ಇವರುಗಳ ತಕರಾರು ಅರ್ಜಿಯನ್ನು ವಜಾ ಮಾಡಿ ಜಿಲ್ಲಾ ನೋಂದಣಾಧಿಕಾರಿಗಳು ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.


Monday, December 8, 2008

ಕರುಣಾನಿಧಿ ಹೇಳಿಕೆ- ತಮಿಳುನಾಡಿಗೆ ಹೋಗುವ ರಸ್ತೆ ತಡೆ

ಹೊಗೇನಕಲ್ ಮತ್ತು ತಿರುವಳ್ಳವರ್ ಪ್ರತಿಮೆ ವಿಚಾರವಾಗಿ ತಮಿಳುನಾಡಿನ ಮುಖ್ಯಮಂತ್ರಿ ನೀಡಿರುವ ಹೇಳಿಕೆಗೆ ವಿರುದ್ಧವಾಗಿ
ಕರವೇ ರಸ್ತೆ ತಡೆ ನಡೆಸಿತು.



Sunday, December 7, 2008

ಹೊಗೇನಕಲ್- ಕರುಣಾನಿಧಿ ಹೇಳಿಕೆ ವಿರುದ್ಧ ಪ್ರತಿಭಟನೆ

ಹೊಗೇನಕಲ್ ಮತ್ತು ತಿರುವಳ್ಳವರ್ ಪ್ರತಿಮೆ ವಿಚಾರವಾಗಿ ತಮಿಳುನಾಡಿನ ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆಯ ವಿರುದ್ಧ ಕರವೇ ತಮಿಳುನಾಡಿಗೆ ಹೋಗುವ ರೈಲುಗಳನ್ನು ತಡೆದು ಪ್ರತಿಭಟಿಸಿತು.










Friday, December 5, 2008

ಮುಗಿಯದ ಬಿಹಾರಿಗಳ ಅಟ್ಟಹಾಸ

ಬೆಂಗಳೂರಿನ ಮಲ್ಲೇಶ್ವರದಲ್ಲಿ ಬಿಹಾರಿ ಕಾರ್ಮಿಕರು ಕನ್ನಡಿಗರ ಮೇಲೆ ಗೂಂಡಾಗಿರಿ ನಡೆಸಿದ್ದಾರೆ.... ಇದರ ವಿರುದ್ಧ ಕರವೇ ಪ್ರತಿಭಟನೆ ನಡೆಸಿ, ಗೂಂಡಾಗಿರಿ ನಡೆಸಿದ ಬಿಹಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಪೋಲೀಸರನ್ನು ಆಗ್ರಹಿಸಿದೆ.

Thursday, December 4, 2008

ಬೆಂಗಳೂರು ಹಬ್ಬಕ್ಕೆ ಅನುದಾನ ನಿಲ್ಲಿಸಿ